ಮಂಗಳೂರು: ಸುರತ್ಕಲ್ ಬೀಚ್ ನಲ್ಲಿ ಬೂತಾಯಿ ಮೀನಿನ ರಾಶಿ: ಮೀನು ಹೆಕ್ಕಲು ಮುಗಿ ಬಿದ್ದ ಜನರು
ಮಂಗಳೂರು: ಮಂಗಳೂರು ಹೊರವಲಯದ ಸುರತ್ಕಲ್ ಸಮುದ್ರ ತೀರಲ್ಲಿ ಮೀನಿನ ಸುನಾಮಿ ಎದ್ದಿದ್ದು ಮೀನು ಹೆಕ್ಕಲು ಸ್ಥಳೀಯ ಜನರು ಮುಗಿ ಬಿದ್ದಿದ್ದಾರೆ.
ಸುರತ್ಕಲ್ ಮುಕ್ಕ ಜೋರ ಬಳಿಯಿಂದ ಮಿತ್ರ ಪಟ್ನ ತನಕ ಮೀನಿನ ರಾಶೀಯೇ ತೀರಕ್ಕೆ ಬಂದು ಬಿದ್ದಿದ್ದು, ಇದರಲ್ಲಿ ಬೂತಾಯಿ ಮೀನುಗಳೆ ಹೆಚ್ಚಾಗಿದೆ.
ಮೀತಿ ಮೀರಿದ ಮೀನು ನಾಡ ದೋಣಿಗಳಿಗೆ ಸಿಕ್ಕಿದ್ದು ಸರಿಯಾದ ಮಾರುಕಟ್ಟೆ ದರ ಸಿಗದ ಕಾರಣ ಬಲೆಗೆ ಸಿಕ್ಕ ಮಿನುಗಳನ್ನು ಮರಳಿ ಸಮುದ್ರಕ್ಕೆ ಬಿಸಾಡಿರಬಹುದೆಂದು ಕೆಲ ಮೀನುಗಾರರು ಶಂಕಿಸಿದ್ದಾರೆ. ಆದರೆ ತೀರಲ್ಲಿ ಬಿದ್ದ ಸಾವಿರಾರು ಮೀನುಗಳನ್ನು ಹೆಕ್ಕಿ ಕೆಜಿಗೆ 20 ರಂತೆ ಸ್ತಳಿಯ ಕೆಲವರು ಮಾರಾಟ ಮಾಡಿ ಹಣ ಸಂಪಾದನೆ ಮಾಡಿದ್ದಾರೆ ಎಂದು ಹೇಳಲಾಗಿದೆ.




