December 19, 2025

ಪರ್ತಿಪ್ಪಾಡಿ ಮದ್ರಸದಲ್ಲಿ ಪ್ರಾರ್ಥನಾ ದಿನಾಚರಣೆ, ಅನುಸ್ಮರಣೆ

0
IMG-20211107-WA0155

ಪುತ್ತೂರು: ಪ್ರತಿಷ್ಠಿತ ‘ಸಮಸ್ತ’ ವಿದ್ಯಾಭ್ಯಾಸ ಬೋರ್ಡ್ ನಿರ್ದೇಶನದಂತೆ ಇಂದು ನಡೆದ ಪ್ರಾರ್ಥನಾ ದಿನದ ಪ್ರಯುಕ್ತ ವಿಶೇಷ ಪ್ರಾರ್ಥನೆ ಹಾಗೂ ಅಗಲಿದ ಉಲಮಾ,ಉಮರಾ ನಾಯಕರ ಅನುಸ್ಮರಣೆಯು ಪರ್ತಿಪ್ಪಾಡಿ ನೂರುಲ್ ಉಲೂಂ ಮದ್ರಸ ಸಭಾಂಗಣದಲ್ಲಿ ಜರಗಿತು.

ಸ್ಥಳೀಯ ಜಮಾಅತ್ ಅಧ್ಯಕ್ಷ ಪಿ.ಎಂ.ಅಬ್ದುಲ್ ಹಕೀಂ ಪರ್ತಿಪ್ಪಾಡಿ ಅವರು ಅಧ್ಯಕ್ಷತೆ ವಹಿಸಿದ್ದರು.
ಪ್ರಾರ್ಥನೆಗೆ ನೇತೃತ್ವ ನೀಡಿ ಮಾತನಾಡಿದ ಸ್ಥಳೀಯ ಮುದರ್ರಿಸ್ ಜಿ.ಎಂ.ಅಬ್ದುರ್ರಹ್ಮಾನ್ ಫೈಝಿ ಅವರು, ‘ಸಮಸ್ತ’ ದ ಅಗಲಿದ ನೇತಾರರ ಸೇವೆಯ ಬಗ್ಗೆ ವಿವರಿಸಿದರು.


ಜಮಾಅತ್ ಪ್ರದಾನ ಕಾರ್ಯದರ್ಶಿ ಅಬೂಬಕ್ಕರ್ ಹಾಜಿ, ಕೋಶಾದಿಕಾರಿ ಅಹ್ಮದ್ ಕುಂಞ, ಕಾರ್ಯದರ್ಶಿ ಕಲಂದರ್ ಪರ್ತಿಪ್ಪಾಡಿ,ಉಪಾಧ್ಯಕ್ಷ ಉಮರ್ ಹಾಜಿ, ಪರ್ತಿಪ್ಪಾಡಿ ಎಸ್.ವೈ.ಎಸ್. ಅಧ್ಯಕ್ಷ ಅಬೂಬಕ್ಕರ್, ಅಬ್ಬಾಸ್ ದಾರಿಮಿ, ಎ.ಕೆ.ಉಸ್ತಾದ್ ಹಾಗೂ ಸ್ಥಳೀಯ ದರ್ಸ್ ಮತ್ತು ಮದ್ರಸ ವಿದ್ಯಾರ್ಥಿಗಳು, ಎಸ್.ಕೆ.ಎಸ್.ಬಿ.ವಿ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಸಮಾರಂಭದಲ್ಲಿ ಖುರ್ ಆನ್ ಪಾರಾಯಣ ಮತ್ತು ವಿಶೇಷ ಪ್ರಾರ್ಥನೆ ನಡೆಯಿತು.
ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ ಸ್ವಾಗತಿಸಿ, ಪ್ರಾರ್ಥನಾ ದಿನದ ಬಗ್ಗೆ ವಿವರಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!