ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾಲ್ನಡಿಗೆ ಜಾಥಾಕ್ಕೆ ಚಾಲನೆ: ಗಾಂಧೀಜಿಯನ್ನು ಹತ್ಯೆ ಮಾಡಿದವರನ್ನು ನಾವು ಎಂದಿಗೂ ಹತ್ತಿರ ಸೇರಿಸುವುದಿಲ್ಲ: ರಮಾನಾಥ ರೈ
ಬಿ.ಸಿ.ರೋಡ್ : ನಮ್ಮ ದೇಶದ ಅಭಿವೃದ್ಧಿ ಆಗಿರುವುದು ಎಪ್ಪತೈದು ವರ್ಷದಲ್ಲಿಗಳಿಂದ ಆರಂಭವಾಗಿದೆ. ಗಾಂಧೀಜಿ ನಮ್ಮ ಊರಿಗೆ ಮೂರು ಸಲ ಬಂದಿದ್ದರು. ಆ ಸಂದರ್ಭಗಳಲ್ಲಿ ಬಂದಾಗ ಇಡಿ ದೇಶ ಒಂದಾಗಿ ಓಗೊಟ್ಟು ಮನೆ, ಮಠ ಒಂದಾಗಿ ಅವರ ಹಿಂದಿತ್ತ್ತು. ಆಗ ಫೇಸ್ಬುಕ್, ವಾಟ್ಸಪ್ ಇರಲಿಲ್ಲ. ಇನ್ನೂರೈವತ್ತು ಚಾನೆಲ್ ಇರಲಿಲ್ಲ. ಉದ್ಘೋಷಗಳು ಇರಲಿಲ್ಲ. ಆಗ ಇದ್ದದ್ದು ಮನಸ್ಸಿನಿಂದ ಮನಸ್ಸಿಗೆ ಹೃದಯದಿಂದ ಹೃದಯಕ್ಕೆ ಸಂಚಲನ ಸ್ವಾತಂತ್ರ್ಯದ ಅವರ ಮಾತುಗಳು ಎಂದು ನಿವೃತ್ತ ಪ್ರಾಂಶುಪಾಲ ಉದಯ ಕುಮಾರ್ ಇರ್ವತ್ತೂರು ತಿಳಿಸಿದರು.
ಅವರು ಅವರು ಮಂಗಳವಾರ ಮಣಿಹಳ್ಳ ಜಂಕ್ಷನ್ನಲ್ಲಿ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಹಮ್ಮಿಕೊಂಡ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ೭೫ನೇ ಸ್ವಾತಂತ್ರ್ಯ ಸಂಭ್ರಮಾಚರಣೆಯ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ ಹಿರಿಯರು ಮಾಡಿದ ತ್ಯಾಗ ಬಲಿದಾನಗಳಿಂದ ಓದುವ ಸ್ವಾತಂತ್ರ್ಯ, ನಮಗೆ ಕನಸು ಕಾಣುವ ಅವಕಾಶ ಸ್ವಾತಂತ್ರ್ಯ ಕೊಟ್ಟಿದೆ. ಸ್ವಾತಂತ್ರ್ಯ ಹೋರಾಟಕ್ಕೆ ನೆಹರೂ, ಗಾಂಧೀಜಿ ಮಾತ್ರವಲ್ಲದೇ ಬಂಟ್ವಾಳದಿಂದ ಅಮ್ಮೆಂಬಳ ಬಾಳಪ್ಪ, ಅಮ್ಮು ಶೆಟ್ಟಿ ಬಂಟ್ವಾಳ, ಕೇಶವ ಬಾಳಿಗ, ಮಾಧವ ಪೈ, ಮಾಧವ ಶೆಣೈ, ಗೋಪಾಲ ಬಾಳಿಗ, ಕೃಷ್ಣ ಪೈ, ಸುಬ್ರಾಯ ಪೈ, ಲಕ್ಷ್ಮೀನಾರಾಯಣ ಕಿಣಿ, ಮಹಮ್ಮದ್ ಹುಸೈನ್ ಕೊಳ್ನಾಡು, ಮಾಧವ ಶೆಣೈ, ಬೆಳ್ಳಿಪ್ಪಾಡಿ ಮನೆತನದ ವೆಂಕಪ್ಪ ರೈ, ಅವರ ತಮ್ಮ ತಿಮ್ಮಪ್ಪ ರೈ, ಅವರ ಮಡದಿ ಲಕ್ಷ್ಮೀ ರೈ, ಮಕ್ಕಳಾದ ರಘುನಾಥ ರೈ, ಜಗನ್ನಾಥ ರೈ ಇಂತಹಾ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ನಮ್ಮ ಊರಿನಿಂದ ಹೋರಾಟ ಮಾಡಿದವರು ಎಂದು ತಿಳಿಸಿದರು.

ಮಾಜಿ ಸಚಿವ ರಮಾನಾಥ ರೈ ಮಾತನಾಡಿ ದೇಶ ಪ್ರೇಮಿಗಳು ಯಾರೂ ರಾಷ್ಟ್ರಧ್ವಜವನ್ನು ಕಾಟಾಚಾರಕ್ಕೆ ಆಚರಿಸುವುದಿಲ್ಲ. ಮಹತ್ಮಾ ಗಾಂಧೀಜಿಯನ್ನು ಹತ್ಯೆ ಮಾಡಿದವರನ್ನು ನಾವು ಎಂದಿಗೂ ಹತ್ತಿರ ಸೇರಿಸುವುದಿಲ್ಲ. ಆದರೆ ಮಹಾತ್ಮರನ್ನೆ ಹತ್ಯೆ ಮಾಡಿದವರ ಭಾವಚಿತ್ರವನ್ನು ಬಳಸುವವರೂ ಈಗ ಇದ್ದಾರೆ. ಮಹಾತ್ಮಾ ಗಾಂಧಿಯವರನ್ನು ಹತ್ಯೆ ಮಾಡಿದವರಿಗೆ ಬುದ್ದಿ ಹೇಳುವವರು ನಾವು ಹೇಳುವವರಲ್ಲ. ನಾವು ಸ್ವಾತಂತ್ರ್ಯ ಸಂಗ್ರಾಮದ ವೀರ ಯೋಧರ ತ್ಯಾಗ ಬಲಿದಾನ ಮತ್ತು ದೇಶಕ್ಕೆ ಶಾಂತಿ ಸಾಮರಸ್ಯ ಸಾರುವ ನಿಟ್ಟಿನಲ್ಲಿ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ದಕ್ಷಿಣ ಜಿಲ್ಲಾ ಕಾಂಗ್ರೆಸ್ನ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ ಈ ದೇಶಕ್ಕೆ ಕೊಡುವ ಗೌರವ ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಸ್ವಾತಂತ್ರ್ಯ ಸಿಗುವ ಸಂದರ್ಭದಲ್ಲಿ ನಮಗೆ ಹೋರಾಡುವ ಭಾಗ್ಯ ಇರಲಿಲ್ಲ. ಆದರೆ ಈಗ ನಮಗೆ ೭೫ನೇ ವರ್ಷದ ಸ್ವಾತಂತ್ರ್ಯ ಸಂದರ್ಭದಲ್ಲಿ ರಾಷ್ಟ್ರ ಧ್ವಜವನ್ನು ಗೌರವಯುತವಾಗಿ ಹಿಡಿದು ಕಾಲ್ನಡಿಗೆಯಲ್ಲಿ ಹೋಗುವ ಯೋಗ ಕೂಡಿ ಬಂದಿದೆ ಎಂದು ತಿಳಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಕ್ಷಿತ್ ಶಿವರಾಮ್, ಡಿ.ಎಸ್.ಮಮತಾ ಗಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ಯಾಲೆಟ್ ಪಿಂಟೋ, ಜಿ.ಪಂ.ಮಾಜಿ ಸದಸ್ಯರಾದ ಎಂ.ಎಸ್.ಮಹಮ್ಮದ್, ಬಿ.ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ಕುಮಾರ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಸಹಕಾರಿ ಘಟಕದ ಸಂಚಾಲಕ ಸುದರ್ಶನ್ ಜೈನ್, ತಾ.ಪಂ.ಮಾಜಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜಯಂತಿ ಪೂಜಾರಿ, ಲವಿನಾ ವಿಲ್ಮಾ ಮೊರಾಸ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಜೋರಾ, ಇಬ್ರಾಹಿಂ ನವಾಜ್, ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತಾ ಡಿಸೋಜಾ, ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕಲ್ಮಂಜ, ಪ್ರಮುಖರಾದ ಮಲ್ಲಿಕಾ ವಿ.ಶೆಟ್ಟಿ, ಸಂಪತ್ಕುಮಾರ್ ಶೆಟ್ಟಿ, ದಯಾನಂದ ಶೆಟ್ಟಿ ಅಮೈ, ವೆಂಕಪ್ಪ ಪೂಜಾರಿ, ದೇವಪ್ಪ ಕುಲಾಲ್ ಪಂಜಿಕಲ್ಲು, ಮಹಮ್ಮದ್ ನಂದರಬೆಟ್ಟು, ಸದಾಶಿವ ಬಂಗೇರ, ಜನಾರ್ದನ ಚಂಡ್ತಿಮಾರ್, ಮಹಮ್ಮದ್ ನಂದಾವರ, ಮಧುಸೂದನ್ ಶೆಣೈ, ಸುಭಾಶ್ಚಂದ್ರ ಶೆಟ್ಟಿ ಕುಲಾಲ್, ರೋಶನ್ ರೈ, ಚಂದ್ರಶೇಖರ ಪೂಜಾರಿ, ಜಗದೀಶ್ ಕೊಯಿಲ, ವಾಸು ಪೂಜಾರಿ ಮೊದಲಾದವರಿದ್ದರು.







