March 25, 2026

ಸಿನಿಮಾ ನೋಡಿ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಯುವಕ

0
image_editor_output_image1315081642-1660206081201.jpg

ಮಧುಗಿರಿ : ಅರುಂಧತಿ ಸಿನಿಮಾವನ್ನು ಹತ್ತಾರು ಬಾರಿ ನೋಡಿದ್ದ ಯುವಕನೊಬ್ಬ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ನರಳಾಡುತ್ತಿದ್ದು ಕರವೇ ತಾಲೂಕು ಅಧ್ಯಕ್ಷ ಶಿವಕುಮಾರ್ ನೆರವಿನಿಂದ ಆಸ್ಪತ್ರೆ ಸೇರಿ ಬದುಕುಳಿದಿದ್ದಾನೆ.

ತಾಲೂಕಿನ ಗಿಡೈಯ್ಯನಪಾಳ್ಯದ ಸಿದ್ದಪ್ಪ ನವರ ಪುತ್ರ ರೇಣುಕಾ ಪ್ರಸಾದ್ (22) ಎಂಬ ಯುವಕನೇ ಈ ಕೆಲಸ ಮಾಡಿಕೊಂಡಿರುವುದು.

20 ಲೀ. ಪೆಟ್ರೋಲ್ ತಂದಿದ್ದ ಈತ ಅದನ್ನು ರೇಷ್ಮೆ ಶೆಡ್ ನಲ್ಲಿರಿಸಿ 1 ಲೀ. ಪೆಟ್ರೋಲ್ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.

ಬಳಿಕ ಬೆಂಕಿಯ ಉರಿ ತಾಳಲಾರದೆ ರಸ್ತೆಗೆ ಓಡಿ ಬಂದು ಕಿರುಚಾರಡುತ್ತಿದ್ದ. ಈ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ತಾಲೂಕು ಕರವೇ ಅಧ್ಯಕ್ಷ ಶಿವಕುಮಾರ್ ಹಾಗೂ ಸ್ನೇಹಿತರು ತಕ್ಷಣ ತುರ್ತುವಾಹನಕ್ಕೆ ಕರೆ ಮಾಡಿ ಆಸ್ಪತ್ರೆಗೆ ರವಾನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!