March 26, 2026

3 ದಿನಕ್ಕೆ 15 ಸಾವಿರ ರೂಪಾಯಿಗೆ ಬಾಡಿಗೆಗೆ ಕಾರು ನೀಡಿದ್ದ ಆರೋಪಿ ಅಜೀತ್ ಕ್ರಾಸ್ತಾ: ಫಾಝಿಲ್ ಗಾಗಿ ಜಂಕ್ಷನ್ ನಲ್ಲೇ ಓಡಾಡಿದ್ದ ಆರೋಪಿಗಳು

0
image_editor_output_image287466417-1659431202917.jpg

ಸುರತ್ಕಲ್: ಜುಲೈ 28ರಂದು ಕಾರಿನಲ್ಲಿ ಬಂದು ಫಾಝಿಲ್ ಮೇಲೆ  ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು. ಡಿಸಿಪಿ ಅನ್ಶು ಕುಮಾರ್ ನೇತೃತ್ವದಲ್ಲಿ ಏಳೆಂಟು ತಂಡದಲ್ಲಿ ತನಿಖೆ ಮಾಡಲಾಗಿತ್ತು. ಹತ್ಯೆಗೆ ಬಳಿಸಿದ ಇಯಾನ್ ಕಾರಿನ ಮಾಲಕನಿಂದ ಆರೋಪಿಗಳ ಮಾಹಿತಿ ಸಿಕ್ಕಿತು.‌ ಹೆಚ್ಚು ಹಣದಾಸೆಗೆ ಅಜಿತ್ ಕ್ರಾಸ್ತಾ ಕಾರು ನೀಡಿದ್ದ. ಮೂರು ದಿನಕ್ಕೆ ಹದಿನೈದು ಸಾವಿರ ಕೊಡುವುದಾಗಿ ಆರೋಪಿಗಳು ಹೇಳಿದ್ದರು ಎಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದರು.

ಕೃತ್ಯಕ್ಕೆ ಸುಹಾಸ್ ಶೆಟ್ಟಿ ಮೊದಲು ಅಭಿಷೇಕ್ ನೊಂದಿಗೆ ಯೋಜನೆ ರೂಪಿಸಿದ್ದ. ಅನಂತರ ಉಳಿದವರನ್ನು ಸೇರಿಸಿಕೊಂಡಿದ್ದಾರೆ. ಯಾರಿಗೆ ಹೊಡೆಯುವುದು ಎಂದು ಚರ್ಚಿಸಿದಾಗ ಫಾಝಿಲ್ ಗೆ ಹೊಡೆಯಲು ನಿರ್ಧರಿಸಿದ್ದಾರೆ. ಕೃತ್ಯಕ್ಕೆ ಮೂರು ತಲವಾರು ಉಪಯೋಗಿಸಿದ್ದಾರೆ. ಕೃತ್ಯ ನಡೆಸಿದ ದಿನ ಫಾಝಿಲ್ ಗಾಗಿ ಜಂಕ್ಷನ್ ನಲ್ಲಿ ಓಡಾಡಿದ್ದರು. ನಂತರ ಅಂಗಡಿ ಬಳಿ ಫಾಝಿಲ್ ಸಿಕ್ಕಾಗ ಆತನ ಮೇಲೆ ಸುಹಾಸ್, ಮೋಹನ್ ಮತ್ತು ಅಭಿಷೇಕ್ ನೇರವಾಗಿ ಕೊಲೆ ನಡೆಸಿದ್ದಾರೆ.

ಗುರುವಾರ ರಾತ್ರಿ ಕೃತ್ಯ ನಡೆಸಿದ ಆರೋಪಿಗಳು ಪಲಿಮಾರು ರಸ್ತೆಯ ಮೂಲಕ ಪಡುಬಿದ್ರಿ ಸಮೀಪದ ಇನ್ನಾಕ್ಕೆ ಹೋಗಿ ಅಲ್ಲಿ ಕಾರನ್ನಿಟ್ಟು, ಅಲ್ಲಿಂದ ಬೇರೆ ಕಾರಿನಲ್ಲಿ ತೆರಳಿದ್ದರು. ತನಿಖೆಯ ಬಳಿಕ ಇಂದು‌ ಬೆಳಗ್ಗೆ ಖಚಿತ ಮಾಹಿತಿ ಮೇರೆಗೆ ಉದ್ಯಾವರ ಸಮೀಪ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಕಮಿಷನರ್ ಶಶಿಕುಮಾರ್ ಹೇಳಿದರು.

ಸುರತ್ಕಲ್ ನಲ್ಲಿ ಬೇರೆಯವರನ್ನು ಹತ್ಯೆ ಮಾಡಲು ಹೋಗಿ ಫಾಜಿಲ್ ಕೊಲೆ ಮಾಡಿದ್ದರು ಎಂಬ ಮಾತುಗಳು ಕೇಳಿಬಂದಿತ್ತು. ಆದರೆ ಈ ಹಂತಕರು ಫಾಝಿಲ್ ಗೆ ಗುರಿ ಇಟ್ಟಿದ್ದರು. ಕೃತ್ಯಕ್ಕೆ ಮೊದಲು ಚರ್ಚೆಯ ವೇಳೆ ಆರರಿಂದ ಏಳು ಜನಕ್ಕೆ ಹೊಡೆಯುವ ಬಗ್ಗೆ ನಿರ್ಧರಿಸಿ ಅಂತಿಮವಾಗಿ ಫಾಝಿಲ್ ಗೆ ಗುರಿ ಇಟ್ಟಿದ್ದರು ಎಂದರು.

ಈ ಆರೋಪಿಗಳು ಫಾಝಿಲ್ ನನ್ನೇ ಯಾಕೆ ಟಾರ್ಗೆಟ್ ಮಾಡಿದ್ದರು ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ. ಪ್ರಮುಖ ಆರೋಪಿ ಸುಹಾಸ್ ಮೇಲೆ ಒಂದು ಕೊಲೆ ಸಹಿತ ನಾಲ್ಕು ಪ್ರಕರಣಗಳಿವೆ.

ಫಾಝಿಲ್‌ನನ್ನೇ ಟಾರ್ಗೆಟ್‌ ಮಾಡಿದ್ದರು
ಜುಲೈ 28ರಂದು ರಾತ್ರಿ 8 ಗಂಟೆಯ ಹೊತ್ತಿಗೆ ಬಟ್ಟೆ ಶಾಪ್‌ ಒಂದರ ಹೊರಗೆ ನಿಂತಿದ್ದ ಫಾಝಿಲ್‌ನನ್ನು ಬಿಳಿ ಕಾರಿನಲ್ಲಿ ಬಂದಿದ್ದ ಹಂತಕರು ಕೊಲೆ ಮಾಡಿದ್ದರು. ಆರಂಭದಲ್ಲಿ ಇದೊಂದು ಮಿಸ್ಟೇಕನ್‌ ಐಡೆಂಟಿಟಿ ಅಂದರೆ ಯಾರನ್ನೋ ಕೊಲೆ ಮಾಡುವ ಬದಲು ತಪ್ಪಿ ಫಾಝಿಲ್‌ ಕೊಲೆಯಾಗಿದೆ ಎಂದು ಹೇಳಲಾಗುತ್ತಿತ್ತು. ಯಾಕೆಂದರೆ, ಫಾಝಿಲ್‌ಗೆ ಯಾವುದೇ ಕ್ರಿಮಿನಲ್‌ ಹಿನ್ನೆಲೆಗಳು ಇರಲಿಲ್ಲ. ಈ ಮಧ್ಯೆ ಮೊಬೈಲ್‌ ಅಂಗಡಿಯೊಂದರ ಮಾಲೀಕನಾಗಿರುವ ಫಾರೂಕ್‌ ಎಂಬಾತ ತನ್ನನ್ನು ಯಾರೋ ಹಿಂಬಾಲಿಸಿದ್ದರು ಎಂದು ದೂರು ನೀಡಿದ್ದ.

ಆದರೆ, ಈಗ ಸಿಕ್ಕಿರುವ ಮಾಹಿತಿಯ ಪ್ರಕಾರ ಹಂತಕರು ಫಾಝಿಲ್‌ನನ್ನೇ ಕೊಲೆ ಮಾಡಲು ಪ್ಲ್ಯಾನ್‌ ಮಾಡಿ ಅದನ್ನು ಸಾಧಿಸಿದ್ದಾರೆ. ಜುಲೈ 26ರಂದು ರಾತ್ರಿ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ ಪ್ರವೀಣ್‌ ನೆಟ್ಟಾರು ಅವರನ್ನು ಕೊಲೆ ಮಾಡಿದ್ದಕ್ಕೆ ಪ್ರತಿಯಾಗಿ 27 ರಂದು ಯಾರನ್ನಾದ್ರೂ ಕೊಲ್ಲಬೇಕು ಅಂತಾ ಪ್ಲಾನ್ ಮಾಡಿದ್ರು ಎನ್ನಲಾಗಿದೆ.



ಹಂತಕರ ಕಾರ್ಯಾಚರಣೆ ಹೇಗಿತ್ತು?

ಸುಹಾಸ್ ಶೆಟ್ಟಿ ಮತ್ತು ಗಿರಿಧರ್ ಅವರು ಕೊಲೆಯ ಪ್ಲ್ಯಾನ್‌ ರೂಪಿಸಿದ್ದು, ಮೋಹನ್ ಆತನ ಸ್ನೇಹಿತನ ಮೂಲಕ ಕಾರು ಬಾಡಿಗೆ ಪಡೆದಿದ್ದ. ಜು. 27ರಂದು ಮೂವರು ಚರ್ಚೆ ಮಾಡಿ ಯಾರನ್ನು ಕೊಲ್ಲಬೇಕು ಎಂದು ತೀರ್ಮಾನ ಮಾಡಿದ್ದರು. 27ರಂದು ಪ್ಲಾನ್ ವರ್ಕೌಟ್ ಆಗದ ಹಿನ್ನೆಲೆಯಲ್ಲಿ 28ರಂದು ಕೊಲೆ ಮಾಡಲಾಗಿದೆ.

ಕೊನೆಗೆ ಫಾಝಿಲ್‌ನನ್ನೇ ಕೊಲೆ ಮಾಡುವುದು ಎಂದು ತೀರ್ಮಾನಿಸಲಾಗಿದೆ. ಸುಹಾಸ್‌ ಮತ್ತು ಸ್ನೇಹಿತರು ಕೊಲೆಗೆ ಮೊದಲು ಕಾರಿಂಜದ ದೇವಸ್ಥಾನಕ್ಕೆ ಹೋಗಿ ಬಂದಿದ್ದರು. ಅಲ್ಲಿ ಆವತ್ತು ಆಟಿ ಅಮಾವಾಸ್ಯೆ ಸ್ನಾನ ಇತ್ತು.



ರಾತ್ರಿ ಎಂಟು ಗಂಟೆಯ ಹೊತ್ತಿಗೆ ಸುಖೇಶ್, ಮೋಹನ್ ಮತ್ತು ಅಭಿಷೇಕ್‌ ಅವರು ಸೇರಿ ಈ ಕೆಲ ಮಾಡಿದ್ದಾರೆ. ಅವರನ್ನು ಆ ಜಾಗಕ್ಕೆ ಕಾರಿನಲ್ಲಿ ತಂದು ಬಿಟ್ಟವನು ಶ್ರೀನಿವಾಸ್‌. ಗಿರೀಶ್‌ ಮತ್ತು ದೀಕ್ಷಿತ್‌ ಕಾರಿನಲ್ಲೇ ಕುಳಿತು ಕಾಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!