ಕನ್ಯಾನ: ದುಲ್ಪುಖಾರ್ ಸೇವಾ ಟ್ರಸ್ಟ್ ಮಾಜಿ ಅಧ್ಯಕ್ಷ ಅಬ್ದುಲ್ ಖಾದರ್ ಚೆಡವು ಹೃದಯಾಘಾತದಿಂದ ನಿಧನ
ವಿಟ್ಲ: ದುಲ್ಪುಖಾರ್ ಸೇವಾ ಟ್ರಸ್ಟ್ ಕನ್ಯಾನ ಇದರ ಮಾಜಿ ಅಧ್ಯಕ್ಷ ಅಬ್ದುಲ್ ಖಾದರ್ ಚೆಡವು ಯಾನೆ ಪ್ರೂಟ್ ಅದ್ದುಚ್ಚ ಹೃದಯಾಘಾತದಿಂದ ನಿಧನರಾದರು.
ಮೃತರು ಕನ್ಯಾನ ತಾಜುಲ್ ಉಲಮಾ ಟೌನ್ ಮಸೀದಿಯ ಅಧ್ಯಕ್ಷರಾಗಿಯೂ ದುಲ್ಪುಖಾರ್ ಸೇವಾ ಟ್ರಸ್ಟ್ ಸಲಹೆಗಾರರಾಗಿಯೂ ಹಲವು ಸಂಘ ಸಂಸ್ಥೆಗಳ ಸದಸ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು
ಅವರ ನಿಧನವು ದುಲ್ಪುಖಾರ್ ಸಂಘಟನೆ ಮತ್ತು ಸಮುದಾಯಕ್ಕೆ ತುಂಬಲಾರದ ನಷ್ಟ ಮತ್ತು ಅವರ ನಿಧನಕ್ಕೆ ತೀವ್ರವಾದ ಸಂತಾಪವನ್ನು ವ್ಯಕ್ತಪಡಿಸುವುದಾಗಿ ದುಲ್ಪುಖಾರ್ ಸೇವಾ ಟ್ರಸ್ಟ್ ಹಾಗೂ ದುಲ್ ಪುಖಾರ್ ಗಲ್ಫ್ ಕಮಿಟಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





