March 22, 2026

ಹಿಮಾಚಲ ಪ್ರದೇಶ ವಿಧಾನಸಭೆಯ ಮುಖ್ಯ ದ್ವಾರದ ಮೇಲೆ ಖಲಿಸ್ತಾನದ ದ್ವಜ ಮತ್ತು ಬರಹ: ತನಿಖೆಗೆ ಆದೇಶ

0
n38435641816519971783350c7177b37df89e83b4e4da764545554c57f87b9eda041b5c1d875fa27dc7bc51.jpg

ಧರ್ಮಶಾಲಾ: ಡೆಹ್ರಾಡೂನ್‌ನಲ್ಲಿರುವ ಹಿಮಾಚಲ ಪ್ರದೇಶ ವಿಧಾನಸಭೆಯ ಮುಖ್ಯ ದ್ವಾರದ ಮೇಲೆ ಭಾನುವಾರ ಖಾಲಿಸ್ತಾನದ ಧ್ಜಜ ಅಂಟಿಸಲಾಗಿದೆ.

ಘಟನೆಯನ್ನು ಖಂಡಿಸಿರುವ ಮುಖ್ಯಮಂತ್ರಿ ಜೈರಾಮ್ ಠಾಕೂರ್, ಈ ಬಗ್ಗೆ ತಕ್ಷಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ತಡರಾತ್ರಿ ಅಥವಾ ಮುಂಜಾನೆ ಈ ಕೃತ್ಯ ನಡೆದಿರುವ ಸಾಧ್ಯತೆಗಳಿವೆ. ಖಾಲಿಸ್ತಾನ ಧ್ವಜಗಳನ್ನು ತೆಗೆದಿದ್ದೇವೆ. ಪಂಜಾಬ್‌ನಿಂದ ಬಂದಿರಬಹುದಾದ ಪ್ರವಾಸಿಗರು ಈ ಕೆಲಸ ಮಾಡಿರಬಹುದು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಖುಶಾಲ್ ಶರ್ಮಾ ಹೇಳಿದ್ದಾರೆ.

‘ಖಾಲಿಸ್ತಾನ್ ಧ್ವಜವನ್ನು ಹಾರಿಸಿದ ಹೇಡಿತನದ ಘಟನೆಯನ್ನು ನಾನು ಖಂಡಿಸುತ್ತೇನೆ’ ಎಂದು ಸಿಎಂ ಠಾಕೂರ್‌ ಟ್ವೀಟ್‌ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!