March 23, 2026

ಮಾನಸಿಕ ಒತ್ತಡ ದಂಪತಿ ಆತ್ಮಹತ್ಯೆ

0
image_editor_output_image998481741-1651393791592.jpg

ನೋಯ್ಡಾ: ಮನೆಯ ಯಜಮಾನ ಕ್ಯಾನ್ಸರ್‌ ಕೊನೆಯ ಹಂತ ತಲುಪಿರುವುದರಿಂದಾಗಿ ಮಾನಸಿಕ ಒತ್ತಡಕ್ಕೊಳಗಾಗಿದ್ದ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಪ್ರದೇಶ ನೋಯ್ಡಾದ ಸೆಕ್ಟರ್ 22 ಪ್ರದೇಶದಲ್ಲಿ ನಡೆದಿದೆ.

ಅರುಣ್ ಮತ್ತು ಶಶಿಕಲಾ ಆತ್ಮಹತ್ಯೆ ಮಾಡಿಕೊಂಡ ದಂಪತಿ. ಜೋಡಿ ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು.

ಆದರೆ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಅರುಣ್ ಅವರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ್ದಾಗ ಕ್ಯಾನ್ಸರ್‌ನ ಕೊನೆಯ ಹಂತ ತಲುಪಿರುವುದು ಗೊತ್ತಾಗಿತ್ತು. ಇದರಿಂದ ಅರುಣ್ ಬದುಕುವುದು ಕಷ್ಟ ಎಂದೂ ಇಬ್ಬರಿಗೂ ತಿಳಿಯಿತು.

ಪತಿ ಸಾವನ್ನಪ್ಪಿದರೆ ತನ್ನ ಭವಿಷ್ಯದ ಚಿಂತೆ ಶಶಿಕಲಾಗೆ ಎದುರಾಗಿತ್ತು. ಇದರಿಂದ ದಂಪತಿ ತೀವ್ರವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಇದೇ ಕಾರಣದಿಂದ ಸಾಯುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಮನೆಯ ಟೇಬಲ್ ಮೇಲೆ ಡೆತ್ ನೋಟ್ ಬರೆದಿಟ್ಟು ತಮ್ಮ ಸಾವಿಗೆ ತಾವೇ ಕಾರಣ ಎಂದು ಬರೆದಿದ್ದಾರೆ. ಅಲ್ಲದೆ ಟೇಬಲ್ ಮೇಲಿರುವ ಡಾಕ್ಟರ್‍ ರಿಪೋರ್ಟ್‌ ನೋಡಿದರೆ ಸಾಯಲು ಕಾರಣ ಗೊತ್ತಾಗಲಿದೆ ಎಂದೂ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!