December 15, 2025

ನಂತೂರು ಸರ್ಕಲ್: ಟ್ಯಾಂಕರ್ ಹರಿದು ಬೈಕ್ ಸವಾರ ಮೃತ್ಯು

0
Screenshot_2022-04-30-18-31-17-23_680d03679600f7af0b4c700c6b270fe7.jpg

ಮಂಗಳೂರು: ಟ್ಯಾಂಕರೊಂದು ಹರಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ನಗರದ ನಂತೂರು ಸರ್ಕಲ್ ಬಳಿ ಶುಕ್ರವಾರ ಸಂಜೆ ನಡೆದಿದೆ.

ಮೃತಪಟ್ಟವರನ್ನು ಸಲ್ಬಿನ್ ಜಾನ್ (21) ಎಂದು ಗುರುತಿಸಲಾಗಿದ್ದು,ಅಪಘಾತದಲ್ಲಿ ಥಾಮಸ್ ಎಂಬವರು ಗಾಯಗೊಂಡಿದ್ದಾರೆ.

ಇನ್ನು ಕೆಪಿಟಿ ಕಡೆಯಿಂದ ನಂತೂರಿಗೆ ಬರುತ್ತಿದ್ದ ಬೈಕ್‌ಗೆ ಬುಲೆಟ್ ಬೈಕ್ ಢಿಕ್ಕಿ ಹೊಡೆದಿದ್ದು, ಇದರಿಂದ ಬೈಕ್ ಸವಾರಿ ಮಾಡುತ್ತಿದ್ದ ಸಲ್ಬಿನ್ ಜಾನ್ ರಸ್ತೆಗೆ ಬಿದ್ದರು. ಈ ಸಂದರ್ಭ ಹಿಂದಿನಿಂದ ಬಂದ ಟ್ಯಾಂಕರ್ ಅವರ ಮೇಲೆಯೇ ಹರಿದ ಪರಿಣಾಮ ಸಲ್ಬಿನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಬಗ್ಗೆ ಸಂಚಾರಿ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!