January 31, 2026

ವಿಟ್ಲದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಇನ್ನೊಂದು ಇಫ್ತಾರ್ ಕೂಟ

0
IMG-20220428-WA0016.jpg

ವಿಟ್ಲ: ರಾಜ್ಯದಲ್ಲಿ ಇತ್ತೀಚೆಗೆ ದ್ವೇಷದ ವಾತಾವರಣ ಹೆಚ್ಚಾಗುತ್ತಿದ್ದು, ದಿನಬೆಳಗಾದಂತೆ ಬಹಿಷ್ಕಾರ, ದ್ವೇಷದ ಸುದ್ದಿಗಳಿಗೆ ಜನರು ನೊಂದು ಹೋಗಿದ್ದಾರೆ. ಈ ಮಧ್ಯೆ ಕೆಲವೊಂದು ಕಡೆಗಳಲ್ಲಿ ಸೌಹಾರ್ದ ಸಂದೇಶ ಸಾರುವ ಸುದ್ದಿಗಳೂ ವರದಿಯಾಗುತ್ತಿವೆ. ಅಂಥ ಒಂದು ಸುದ್ದಿ ವಿಟ್ಲದಿಂದಲೂ ವರದಿಯಾಗಿದೆ.

ವಿಟ್ಲ ಸಮೀಪದ ಕಡಂಬು ಮಸೀದಿಯಲ್ಲಿ ಮುಸ್ಲಿಮೇತರ ಸಹೋದರರು ಮುಸ್ಲಿಮರಿಗೆ ಇಫ್ತಾರ್ ಕೂಟ ಏರ್ಪಡಿಸುವ ಮೂಲಕ ಪ್ರಜ್ಞಾವಂತ ಜನರ ಪ್ರಶಂಸೆಗೆ ಕಾರಣರಾಗಿದ್ದಾರೆ..

ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿರುವ ಜನಾರ್ಧನ ಪೂಜಾರಿ ಮತ್ತು ಅಣ್ಣ-ತಮ್ಮಂದಿರಾದ ಹರೀಶ್ ಗೌಡ ಮತ್ತು ಮೋಹನ ಗೌಡ ಮುಸ್ಲಿಮ್ ಸಹೋದರರಿಗೆ ಇಫ್ತಾರ್ ಏರ್ಪಡಿಸಿದ್ದಲ್ಲದೆ ತಾವೂ ಭಾಗವಹಿಸಿ ಏನೇ ಆಗಲಿ ನಾವೆಲ್ಲ ಒಂದೇ’ ಎಂದು ಸಮಾಜಕ್ಕೆ ಸೌಹಾರ್ದ ಸಂದೇಶ ಸಾರಿದ್ದಾರೆ.

ಸೋಮವಾರ ಜನಾರ್ಧನ ಪೂಜಾರಿ ಹಾಗೂ ಮಂಗಳವಾರ ಮೋಹನ ಗೌಡ ಮತ್ತು ಹರೀಶ್ ಗೌಡ ಇಫ್ತಾರ್ ಏರ್ಪಡಿಸಿದ್ದರು.

Leave a Reply

Your email address will not be published. Required fields are marked *

error: Content is protected !!