ಹಿಂದೂ ಬೇರೆ ಹಿಂದುತ್ವ ಬೇರೆ, ಹಿಂದುತ್ವ ಎಂದರೆ ಹಿಂಸೆ, ದೌರ್ಜನ್ಯ: ಬಿ.ಕೆ.ಹರಿಪ್ರಸಾದ್
ಬೆಂಗಳೂರು: ಹಿಂದೂ ಬೇರೆ ಹಿಂದುತ್ವ ಬೇರೆ. ಹಿಂದುತ್ವ ಅಂದರೆ ಹಿಂಸೆ ಮತ್ತು ದೌರ್ಜನ್ಯ ಅನ್ನುವುದನ್ನ ತಿಳಿದುಕೊಳ್ಳಿ ಎಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಪ್ರತಿಭಟನೆ ವೇಳೆ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು.
ಸ್ವಾಮಿ ವಿವೇಕಾನಂದ , ಇಂದಿರಾಗಾಂಧಿ ಇವರೆಲ್ಲ ಹಿಂದೂ ಆಗಿದ್ದರು.ಸಹಿಷ್ಣು ತೆಯೇ ಹಿಂದೂ ಧರ್ಮ .ಆದರೆ ಗೋಲ್ವಾಲ್ಕರ್ ಆಗಲಿ ಸಾವರ್ಕರ್ ಆಗಲಿ ಹಿಂದೂ ಧರ್ಮ ಅನುಸರಿಸಿಲ್ಲ ಎಂದು ಟೀಕಿಸಿದರು.
ಗೃಹ ಸಚಿವ ಅರೆ ಪ್ರಜ್ಞೆ ಜ್ಙಾನೇಂದ್ರ..ಅವರಿಗೆ ಹೆಂಡ ಕುಡಿಯುವ ಅಥವಾ ಗಾಂಜಾ ಹೊಡೆಯುವ ಅಭ್ಯಾಸ ಇರಬೇಕು. ಅದಕ್ಕೆ ಏನೇನೋ ಮಾತನಾಡುತ್ತಾರೆ ಎಂದು ಟೀಕಿಸಿದ್ದಾರೆ.




