March 21, 2026

ಬಜರಂಗದಳದ ವಿರುದ್ಧ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ವತಿಯಿಂದ ಚಿಕ್ಕಮಗಳೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯವರ ಭೇಟಿ

0
IMG-20220402-WA0015.jpg

ಚಿಕ್ಕಮಗಳೂರು: ಶಾಂತಿಯುತ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಘಪರಿವಾರದ ಗೂಂಡಗಳಿಂದ ಕಾನೂನು ಉಲ್ಲಂಘಿಸಿ, ಆಟೋಗಳಲ್ಲಿ ಮೈಕ್ ಸೆಟ್ ಮುಖಾಂತರ ಬಹಿರಂಗವಾಗಿ ಪ್ರಚೋದನಕಾರಿಯಾಗಿ ಭಾಷಣ ಮಾಡಿ, ಮುಸ್ಲಿಮರ ವಿರುದ್ಧ ವಿಷ ಬೀಜ ಬಿತ್ತಿ, ಅಂಗಡಿ, ಮನೆಗಳಿಗೆ ತೆರಳಿ ಮುಸಲ್ಮಾನರ ವಿರುದ್ಧ ದ್ವೇಷ ಭರಿತ ಕರಪತ್ರ ಹಂಚಿ, ಹಲಾಲ್ ವಸ್ತುಗಳನ್ನು ಖರೀದಿಸಬೇಡಿ, ಮುಸಲ್ಮಾನರ ಬಳಿ ವ್ಯಾಪಾರ ಮಾಡಬೇಡಿ ಎಂದು ಸಮಾಜದಲ್ಲಿ ದ್ವೇಷ ಬಿತ್ತುತ್ತಿರುವ ಬಜರಂಗದಳದ ಗೂಂಡಾಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ನಿಯೋಗವು ಚಿಕ್ಕಮಗಳೂರು ಪೋಲಿಸ್ ವರಿಷ್ಠಾಧಿಕಾರಿಯವರಿಗೆ ಭೇಟಿ ನೀಡಿ ಮಾತುಕತೆ ನಡೆಸಲಾಯಿತು.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಶ್ರೀನಿವಾಸ್, SDPI ಜಿಲ್ಲಾ ಅಧ್ಯಕ್ಷರಾದ ಗೌಸ್ ಮುನೀರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಝ್ಮತ್ ಪಾಷ, ದಲಿತ ಮುಖಂಡರುಗಳಾದ ಉಮೇಶ್, ಉದ್ದಪ್ಪ, ಮಂಜುನಾಥ್, ನವೀನ್, ಮೋಹನ್, ಪೂರ್ಣೆಶ್, ಕುಮಾರ್, ಗಿರಿಶ್, ಅಣ್ಣಯ್ಯ, ಸುರೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!