ಪಂಚಾಯತ್ ಮೀಟಿಂಗ್ ಬಹಿಷ್ಕರಿಸಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ ಕಾವಳಮೂಡುರು ಪಂಚಾಯತ್ ಸದಸ್ಯೆ ಶೈನಾಝ್ ಹಾಗೂ ಸಫಾ ಸಲ್ಮಾ
ಕಾವಳಕಟ್ಟೆ: ಕರ್ನಾಟಕ ಉಚ್ಛ ನ್ಯಾಯಾಲಯ ಹಿಜಾಬ್ ಕುರಿತ ತೀರ್ಪಿನಲ್ಲಿ ಇಸ್ಲಾಮಿನಲ್ಲಿ ಮುಸ್ಲಿಂ ಮಹಿಳೆಯರಿಗೆ ಹಿಜಾಬ್ ಮಹತ್ವವಲ್ಲ ಮತ್ತು ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುವಿಕೆಯನ್ನು ವಿಮರ್ಶಿಸಿ ಕರ್ನಾಟಕ ದ್ಯಂತ ಮಾರ್ಚ್ 17 ರಂದು ಸ್ವಯಂ ಪ್ರೇರಿತ ವ್ಯವಹಾರ ಸ್ಥಗಿತಕ್ಕೆ ಕರೆ ನೀಡಿರುವ ಶಾಂತಿಯುತ ಬಂದ್ ಗೆ ಬೆಂಬಲವಾಗಿ ಕಾವಳಮೂಡೂರು ಗ್ರಾಮ ಪಂಚಾಯತ್ ಸದಸ್ಯರಾದ ಶೈನಾಝ್ ಎನ್ ಸಿ ರೋಡ್ ಹಾಗೂ ಸಫಾ ಸಲ್ಮಾ ಕಾವಳಕಟ್ಟೆ ವಸತಿ ಯೋಜನೆಯ ಬಗ್ಗೆ ಇಂದು ಮೀಟಿಂಗ್ ಬಹಿಸ್ಕರಿಸಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದರು


