ವಿಟ್ಲ: ವಲಯ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ಪ ಬೇರಿಕೆ ಹೃದಯಾಘಾತಕ್ಕೆ ಬಲಿ
ವಿಟ್ಲ: ವಿಟ್ಲ ಮುಡ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಹಕಾರಿ ಸಂಘ ವಿಟ್ಲ ಮುಡ್ನೂರು ಇದರ ಕಾರ್ಯದರ್ಶಿ, ಬೀಡಿ ಕಾಂಟ್ರಾಕ್ಟರ್ ಉದ್ಯಮಿ ಕೃಷ್ಣಪ್ಪ ಪೂಜಾರಿ ಬೇರಿಕೆ ಇಂದು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
53 ವರ್ಷದ ಕೃಷ್ಣಪ್ಪ ಪೂಜಾರಿ ಮನೆಯಲ್ಲಿರುವಾಗ ಹೃದಯಾಘಾತವಾಗಿದೆ. ಚಿಕಿತ್ಸೆಗೆಂದು ಪುತ್ತೂರಿಗೆ ಹೋಗುತ್ತಿದ್ದಾಗ ಮಾರ್ಗಮಧ್ಯೆ ಅಸುನೀಗಿದ್ದಾರೆ.




