ಗುಂಡ್ಲುಪೇಟೆ: ಬಿಳಿಕಲ್ಲು ಕ್ವಾರೆ ಕುಸಿತ: ಮಣ್ಣಿನಡಿ ಸಿಲುಕಿರುವ ಆರು ಟಿಪ್ಪರ್ ಗಳು, ಮೂರು ಜೆಸಿಬಿಗಳು
ಗುಂಡ್ಲುಪೇಟೆ: ತಾಲೂಕಿನ ಮಡಹಳ್ಳಿ ಸಮೀಪ ಗುಡ್ಡಕುಸಿತವಾದ ಘಟನೆ ಶುಕ್ರವಾರ ಮಧ್ಯಾಹ್ನ 12 ಗಂಟೆಯ ವೇಳೆ ನಡೆದಿದೆ.
ಗುಡ್ಡದಲ್ಲಿ ಬಿಳಿಕಲ್ಲು ಕ್ವಾರಿ ನಡೆಯುತ್ತಿದೆ. ಇಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಈ ಘಟನೆಯಿಂದ ಸಾವು ನೋವುಗಳಾಗಿರುವ ಬಗ್ಗೆ ಇನ್ನೂ ಮಾಹಿತಿ ದೊರೆತಿಲ್ಲ.
ಆರು ಟಿಪ್ಪರ್ ಗಳು, ಮೂರು ಜೆಸಿಬಿಗಳು ಮಣ್ಣಿನಡಿ ಸಿಲುಕಿವೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.




