ವಿಟ್ಲ: ಮೂಲದ ಸುಳ್ಯ ಪೋಲೀಸ್ ಠಾಣೆಯಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿದ್ದ ಯಜ್ಞನಾರಾಯಣರಿಗೆ ಎ.ಎಸ್.ಐ. ಆಗಿ ಪದೋನ್ನತಿ
ವಿಟ್ಲ: ಮೂಲದ ಯಜ್ಞ ನಾರಾಯಣ 2002ರಲ್ಲಿ ಪೋಲೀಸ್ ಸೇವೆಗೆ ಸೇರಿದ ಇವರು, 2012 ರಲ್ಲಿ ಸುಳ್ಯ ಸರ್ಕಲ್ ಇನ್ ಸ್ಪೆಕ್ಟರ್ ಕಚೇರಿಗೆ ಬಂದು ವಾಹನ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. 2017 ರಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿ ಪದೋನ್ನತಿ ಗೊಂಡ ಇವರು ಸುಳ್ಯ ಪೋಲೀಸ್ ಠಾಣೆಗೆ ವರ್ಗಾವಣೆಯಾದರು. ಇದೀಗ ಅವರಿಗೆ ಎ.ಎಸ್.ಐ. ಆಗಿ ಮುಂಭಡ್ತಿ ದೊರೆತಿದೆ.
ಯಜ್ಞ ನಾರಾಯಣರು ವಿಟ್ಲದ ಸಾಲೆತ್ತೂರು ನಿವಾಸಿ. ಪತ್ನಿ ಶ್ರೀಮತಿ ಮಮತಾ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿದ್ದಾರೆ. ಮಗ ಶಮಂತ್ ಸುಳ್ಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.




