February 4, 2026

ಮಂಗಳೂರು: ಉಳ್ಳಾಲದ ಮಾಜಿ ಶಾಸಕ ಬಿ.ಎಂ ಇದಿನಬ್ಬ ಮನೆಗೆ ಮತ್ತೆ ಎನ್ ಐ ಎ ದಾಳಿ: ಪತ್ನಿಯ ವಿಚಾರಣೆ

0
image_editor_output_image1944214990-1641208255336

ಮಂಗಳೂರು: ಉಳ್ಳಾಲದ ಮಾಜಿ ಶಾಸಕ ಬಿ.ಎಂ.ಇದಿನಬ್ಬ ಪುತ್ರನ ಮನೆಗೆ ‌ಮತ್ತೆ ಎನ್ ಐಎ ದಾಳಿ ನಡೆಸಿದೆ. ಪತ್ನಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಂಗಳೂರು ಹೊರವಲಯದ ಉಳ್ಳಾಲದ ಮಾಸ್ತಿಕಟ್ಟೆಯ ಮನೆಯಲ್ಲಿ ಈ ದಾಳಿ ನಡೆದಿದೆ. ಎನ್ ಐ ಎ ತಂಡ ಟೆಂಪೋ ಟ್ರಾವೆಲರ್ ವಾಹನದಲ್ಲಿ ಆಗಮಿಸಿದೆ‌

ಬಿ ಎಂ ಬಾಷಾ ಅವರ ಪುತ್ರ ಪತ್ನಿಯ ಮೇಲೆ ಇರುವ ಸಂಶಯದಿಂದ ಈ ದಾಳಿ ಆಗಿದೆ. ದೀಪ್ತಿ ಮರಿಯಂ ಮೇಲೆ ಎನ್ ಐ ಎ ಅಧಿಕಾರಿಗಳಿಗೆ ಸಂಶಯವಿದ್ದು, ಈ ಹಿನ್ನೆಲೆಯಲ್ಲಿ ಇಂದು ಮನೆಗೆ ದಾಳಿ ನಡೆಸಿ ವಿಚಾರಣೆ ನಡೆಸುತ್ತಿದ್ದಾರೆ. ದೀಪ್ತಿ ಮರಿಯಂ ಮೂಲತ ಹಿಂದೂವಾಗಿದ್ದು, ಈತನನ್ನು ಪ್ರೀತಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ ಮದುವೆಯಾಗಿದ್ದಳು. ಇದೀಗ ಈಕೆಯ ಮೇಲೆ ಸಂಶಯಪಟ್ಟು ಎನ್‌ಐ ಎ‌ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಮರಿಯಂ ಅವರನ್ನೂ ಸುದೀರ್ಘ ವಿಚಾರಣೆ ನಡೆಸಿ ಸಂಜೆ ಮರಿಯಂ ಅವರನ್ನು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!