ವಿಟ್ಲ ಕೇಂದ್ರ ಜುಮಾ ಮಸೀದಿ; ಸಮಸ್ತ ಸ್ಥಾಪನಾ ದಿನಾಚರಣೆ.
ವಿಟ್ಲ ; ವಿಶ್ವ ವಿಖ್ಯಾತ ಉಲಮಾ ಸಂಘಟನೆಯಾದ ಸಮಸ್ತ ಕೇರಳ ಜಮೀಯತುಲ್ ಉಲಮಾ ಇದರ ಸ್ಥಾಪನಾ ದಿನವನ್ನು ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಅಚರಿಸಲಾಯಿತು.
ಜುಮಾ ನಮಾಝ್ ನ ” ಬಳಿಕ ಸಮಸ್ತ “ದ ಧ್ವಜಾರೋಹಣ ಮಾಡಲಾಯಿತು.
ಖತೀಬ್ ಆರಿಫ್ ಬಾಖವಿ ದುವಾ ನೆರವೇರಿಸಿ ಸಮಸ್ತ ಸಂಘಟನೆಯ ಧ್ಯೇಯೋದ್ದೇಶದ ಬಗ್ಗೆ ಮಾತನಾಡಿದರು.
ಮಸೀದಿ ಅಧ್ಯಕ್ಷ ಅಶ್ರಫ್ ಮಹಮ್ಮದ್ ಪೊನ್ನೋಟು, ಕೋಶಾಧಿಕಾರಿ ಶರೀಫ್ ಪೊನ್ನೋಟು, ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ,ಜೊತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ, ಹೊರೈಝನ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಅಝೀಝ್ ಸನ,ಮದರಸ ಅಧ್ಯಕ್ಷ ಇಸ್ಮಾಯಿಲ್ ಪರ್ತಿಪ್ಪಾಡಿ, ಯೂತ್ ವಿಂಗ್ ಅಧ್ಯಕ್ಷ ರಫೀಕ್ ಪೊನ್ನೋಟು, ಮುಅದ್ಸಿನ್ ಹಾಜಿ ಅಬ್ದುಲ್ ಹಕೀಂ ಅರ್ಷದಿ ,ಝುಬೈರ್ ಮಾಸ್ಟರ್ ,ಇಕ್ಬಾಲ್ ಶೀತಲ್, ಅಬ್ದುಲ್ ಹಮೀದ್ ಬದ್ರಿಯಾ, ಅಬೂಬಕರ್ ಮದನಿ,ಇಸ್ಮಾಯಿಲ್ ಹನೀಫಿ,ಉಮ್ಮರ್ ಮುಸ್ಲಿಯಾರ್ ಮುಂತಾದವರು ಉಪಸ್ಥಿತರಿದ್ದರು.




