ವಿಟ್ಲ: ತಾಲೂಕು ಕೇಂದ್ರ ಮತ್ತು ವಿಧಾನ ಸಭಾ ಕ್ಷೇತ್ರ ಮಾಡುವಂತೆ ಆಗ್ರಹಿಸಿ ಜನಜಾಗೃತಿ ಜಾಥಾ
ವಿಟ್ಲ ತಾಲೂಕು ರಚನಾ ಸಮಿತಿ ವತಿಯಿಂದ ವಿಟ್ಲ ತಾಲೂಕು ಮತ್ತು ವಿಟ್ಲ ವಿಧಾನ ಸಭಾ ಕ್ಷೇತ್ರ ಕ್ಕಾಗಿ ಜಾತಾ ನಡೆಯಿತು. ವಿಟ್ಲ ಜೈನ ಬಸದಿ ಯಿಂದ ಹೊರಟ ಜಾತಾ ನಾಡ ಕಚೇರಿ ವರಗೆ ನಡೆದು ಮನವಿ ಸಲ್ಲಿಸಿದರು.

ಹೋರಾಟ ಸಮಿತಿ ಅಧ್ಯಕ್ಷ ಬಿ ಕೆ ಬಶೀರ್, ಗೌರವ ಅಧ್ಯಕ್ಷ ಮುರುವ ಮಹಾಬಲ ಭಟ್, ಸಂಚಾಲಕ ರಾಮಣ್ಣ ಶೆಟ್ಟಿ ,ಉಪಾಧ್ಯಕ್ಷ ಸುದರ್ಶನ ಪಡಿಯಾರ್ ಮತ್ತು ಹಸೈನಾರ್ ಕಡಂಬು, ಕಾರ್ಯದರ್ಶಿ ರಮಾನಾಥ ವಿಟ್ಲ ಜತೆ ಕಾರ್ಯದರ್ಶಿ ಕಾನ ಈಶ್ವರ ಭಟ್ ಸದಾನಂದ ಗೌಡ ಸೇರಾಜೆ ಸಂಘಡನಾ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ನೆಲ್ಲಿಗುಡ್ಡೆ. ಶ್ರೀನಿವಾಸ್ ಕೊಲ್ಯ, ರಾಮಣ್ಣ, ಜಯರಾಮ ಬಲ್ಲಾಳ, ಸುಧೆಶ್ ಭಂಡಾರಿ, ಅಬೂಬಕ್ಕರ್ ಅನಿಲಕಟ್ಟೆ, ಶ್ರೀಧರ ಶೆಟ್ಟಿ ಬೈಲುಗುತ್ತು, ಜಯಂತ ಮತ್ತಿತರರು ಭಾಗವಹಿಸಿದ್ದರು.






