April 23, 2026

ಬಿಸಿಲಿನಿಂದ ರಕ್ಷಣೆ ಪಡೆಯಲು ಹೆಲ್ಮೆಟ್ ಬದಲಿಗೆ ತಲೆಗೆ ಹಸಿರು ಸೊಪ್ಪನ್ನು ಸುತ್ತಿಕೊಂಡು ಬೈಕ್ ಚಾಲನೆ

0
image_editor_output_image1787398494-1776921491962.jpg

ಚಾಮರಾಜನಗರ: ರಾಜ್ಯದಲ್ಲಿ ಬೇಸಿಗೆಯ ಅಬ್ಬರ ಮಿತಿಮೀರಿದ್ದು, ಸೂರ್ಯನ ಪ್ರಖರತೆಗೆ ಜನಸಾಮಾನ್ಯರು ಅಕ್ಷರಶಃ ಹೈರಾಣಾಗಿದ್ದಾರೆ.

ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನವು ಜನರ ನೆತ್ತಿ ಸುಡುತ್ತಿದ್ದು, ಬಿಸಿಲಿನ ಧಗೆಯಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರು ವಿಭಿನ್ನ ಹಾಗೂ ‘ದೇಸಿ’ ಪ್ರಯೋಗಗಳಿಗೆ ಮೊರೆ ಹೋಗುತ್ತಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ಸವಾರನೊಬ್ಬ ಬಿಸಿಲಿನಿಂದ ರಕ್ಷಣೆ ಪಡೆಯಲು ಹೆಲ್ಮೆಟ್ ಬದಲಿಗೆ ತಲೆಗೆ ಹಸಿರು ಸೊಪ್ಪನ್ನು ಸುತ್ತಿಕೊಂಡು ಬೈಕ್ ಚಾಲನೆ ಮಾಡಿದ ವಿಲಕ್ಷಣ ಘಟನೆ ನಡೆದಿದೆ.

ಚಾಮರಾಜನಗರ ಮೂಲದವನೆನ್ನಲಾದ ಸವಾರನೊಬ್ಬ ಬಿಸಿಲಿಗೆ ಕಂಗೆಟ್ಟು ತಲೆಯನ್ನು ತಂಪಾಗಿರಿಸಿಕೊಳ್ಳಲು ಹಸಿರು ಸೊಪ್ಪನ್ನೇ ಪೇಟದಂತೆ ಕಟ್ಟಿಕೊಂಡಿದ್ದನು. ಈತ ಬಾಗಲಕೋಟೆ ನಗರದ ಭುವನೇಶ್ವರಿ ವೃತ್ತದ ಸಿಗ್ನಲ್‌ನಲ್ಲಿ ಕಾಣಿಸಿಕೊಂಡಿದ್ದು, ಆತನ ಈ ವಿಭಿನ್ನ ಶೈಲಿಯನ್ನು ಕಂಡು ದಾರಿಹೋಕರು ಅಚ್ಚರಿಗೊಂಡಿದ್ದಾರೆ.

ಸವಾರನ ಈ ದೃಶ್ಯವು ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಬಿಸಿಲಿನ ತೀವ್ರತೆಗೆ ಈ ದೃಶ್ಯವು ಹಿಡಿದ ಕನ್ನಡಿಯಂತಿದೆ ಎಂದು ನೆಟ್ಟಿಗರು ವ್ಯಾಖ್ಯಾನಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!