ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ: ಸರಿಯಾದ ವಿವೇಚನೆ ಬಳಸಿ ಆದೇಶಿಸಲು ಹೈಕೋರ್ಟ್ ಸೂಚನೆ
ಬೆಂಗಳೂರು: ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ರಾಯಚೂರಿಗೆ ಗಡಿಪಾರಿಗೆ ಆದೇಶಿಸಿದ್ದ ಪುತ್ತೂರು ಉಪವಿಭಾಗಾಧಿಕಾರಿ ಆದೇಶವನ್ನು ಹೈಕೋರ್ಟ್ ಮತ್ತೊಮ್ಮೆ ಬದಿಗಿರಿಸಿದ್ದು, ಸರಿಯಾದ ವಿವೇಚನೆ ಬಳಸಿ ಆದೇಶಿಸಿಸುವಂತೆ ಮತ್ತೆ ಸೂಚನೆ ನೀಡಿದೆ.
ಈ ಹಿಂದೆಯೂ ಗಡಿಪಾರಿಗೆ ಆದೇಶ ನೀಡಿ ಹೈಕೋರ್ಟ್ ನಿಂದ ಸರಿಯಾದ ಆದೇಶ ನೀಡಿ ಎಂದು ಹೇಳಿದ್ದರೂ ಮತ್ತೆ ಪುತ್ತೂರು ಉಪವಿಭಾಗಾಧಿಕಾರಿ ಗಡಿಬಿಡಿಯಲ್ಲಿ ಆದೇಶ ನೀಡಿ ಮತ್ತೊಮ್ಮೆ ಹೈಕೋರ್ಟ್ ನಲ್ಲಿ ಮುಖಭಂಗ ಅನುಭವಿಸಿದ್ದಾರೆ.




