ಬಾವಿಗೆ ಹಾರಿದ ಮಹಿಳೆಯ ರಕ್ಷಣೆ ವೇಳೆ ಅಗ್ನಿಶಾಮಕದಳದ ಸಿಬ್ಬಂದಿ ಸೇರಿ ಮೂವರು ಸಾವು
ಕೊಲ್ಲಂ: ಬಾವಿಗೆ ಹಾರಿದ ಮಹಿಳೆಯನ್ನು ರಕ್ಷಣೆ ಮಾಡಲು ಹೋದ ವೇಳೆ ಬಾವಿಗೆ ಹಾರಿದ ಮಹಿಳೆ ಅಗ್ನಿಶಾಮಕದಳದ ಸಿಬ್ಬಂದಿ ಸೇರಿದಂತೆ ಮೂವರು ಸಾವನಪ್ಪಿದ ಘಟನೆ ಕೇರಳದ ಕೊಲ್ಲಂನ ನೆಡುವತೂರಿನಲ್ಲಿ ನಡೆದಿದೆ.
ಮೃತರನ್ನು ಅಗ್ನಿಶಾಮಕದಳದ ಸಿಬ್ಬಂದಿ ಸೋನಿ ಎಸ್. ಕುಮಾರ್ (36), ಬಾವಿಗೆ ಹಾರಿದ ಮಹಿಳೆ ಅರ್ಚನಾ (33) ಮತ್ತು ಮಹಿಳೆಯ ಸ್ನೇಹಿತ ಶಿವಕೃಷ್ಣನ್ (22) ಎಂದು ಗುರುತಿಸಲಾಗಿದೆ.
ಮಾಧ್ಯಮಗಳ ಮಾಹಿತಿ ಪ್ರಕಾರ ಮಹಿಳೆ ಅರ್ಚನಾ ಮತ್ತು ಆಕೆಯ ಗೆಳೆಯ ಶಿವಕೃಷ್ಣನ್ ನಡುವೆ ಮಧ್ಯರಾತ್ರಿ ಗಲಾಟೆ ನಡೆದಿದೆ. ಈ ವೇಳೆ ಅರ್ಚನಾ ಏಕಾಏಕಿ ಮನೆಯ ಹತ್ತಿರದ ಬಾವಿಗೆ ಹಾರಿದ್ದಾಳೆ. ಘಟನೆಯ ಬಗ್ಗೆ ಅಗ್ನಿಶಾಮಕ ದಳಕ್ಕೆ ಶಿವಕೃಷ್ಣನ್ ಮಾಹಿತಿ ನೀಡಿದ್ದಾನೆ. ಅಗ್ನಿಶಾಮಕದಳದ ಸಿಬ್ಬಂದಿ ಬಂದಾಗ ಮಹಿಳೆ ಅರ್ಚನಾ ಇನ್ನೂ ಜೀವಂತವಾಗಿದ್ದರು.




