ವಿಟ್ಲ: ಮಾರ್ಣಮಿಗುಡ್ಡೆ ಮದರಸ ,ಈದ್ ಮೀಲಾದ್.
ವಿಟ್ಲ: ಮಾರ್ಣಮಿಗುಡ್ಡೆ ಸಿರಾಜುಲ್ ಹುದಾ ಮದರಸದಲ್ಲಿ ಈದ್ ಮೀಲಾದ್ ಕಾರ್ಯಕ್ರಮವು ಅಧ್ಯಕ್ಷ ಇಸ್ಮಾಯಿಲ್ ಮುಸ್ಲಿಯಾರ್ ಸೇರಾಜೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭ ಮದರಸ ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮಗಳು ನಡೆದುವು.
ಇಸ್ಮಾಯಿಲ್ ಹಾಜಿ ನೀರಕಣಿ,ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬೂಬಕರ್ ಅನಿಲಕಟ್ಟೆ, ,ಹನೀಫ್ ಎರುಂಬು,ಝುಬೈರ್ ನೆತ್ತರೆಕೆರೆ,ಸೇಕಾಲಿ ಸೇರಾಜೆ ಮುಂತಾದವರು ಉಪಸ್ಥಿತರಿದ್ದರು.
ಸದರ್ ಅಬ್ದುಲ್ ಹಮೀದ್ ಮುಸ್ಲಿಯಾರ್ ಅವರು ಕಾರ್ಯಕ್ರಮ ಸ್ವಾಗತಿಸಿ,ನಿರೂಪಿಸಿದರು.




