December 15, 2025

ಕೊಳತ್ತಮಜಲು : ಹತ್ಯೆಗೀಡಾದ ರಹೀಂ ಹಾಗೂ ಹಲ್ಲೆಗೊಳಗಾದ ಶಾಫಿ ಮನೆಗೆ ಸಂಯುಕ್ತ ಜಮಾಅತ್ ನಿಯೋಗ ಬೇಟಿ

0
image_editor_output_image-1214173864-1748707377073

ಬಂಟ್ವಾಳ : ತಾಲೂಕಿನ ಕುರಿಯಾಳ ಗ್ರಾಮದ ಈರಾಕೋಡಿ (ಕಾಂಬೋಡಿ) ಎಂಬಲ್ಲಿ ದುಷ್ಕರ್ಮಿಗಳಿಂದ ಕೊಲೆಯಾದ ಬೆಳ್ಳೂರು ನಿವಾಸಿ ಅಬ್ದುಲ್ ರಹಿಮಾನ್ @ ರಹೀಂ ಹಾಗೂ ಹಲ್ಲೆಗೊಳಗಾದ ಖಲಂದರ್ ಶಾಫಿ ಅವರ ಮನೆಗಳಿಗೆ ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ನ ನಿಯೋಗ ಶನಿವಾರ ಬೇಟಿ ನೀಡಿದರು.

    ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ನೀಡಿದ ನಿಯೋಗವು ನಿಮ್ಮ ನೋವಿನಲ್ಲಿ ನಾವು ಕೂಡಾ ಭಾಗಿಗಳು, ನಾವು ನಿಮ್ಮ ಜೊತೆಗೆ ಸದಾ ಇದ್ದೇವೆ, ಎಂದು ಧೈರ್ಯ ತುಂಬಿದರು.

  ಈ ಸಂದರ್ಭದಲ್ಲಿ ಸಂಯುಕ್ತ ಜಮಾಅತ್ ಅಧ್ಯಕ್ಷ ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಉಪಾಧ್ಯಕ್ಷ ಎಂ.ಎಸ್. ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ನೋಟರಿ ಅಬೂಬಕ್ಕರ್ ವಿಟ್ಲ, ಕೋಶಾಧಿಕಾರಿ ಹಾಜಿ.ಪಿ.ಎಸ್.ಅಬ್ದುಲ್ ಹಮೀದ್ ನೆಹರು ನಗರ ಸೇರಿದಂತೆ ಪ್ರಮುಖರಾದ ಎಫ್.ಎಂ. ಬಶೀರ್ ಫರಂಗಿಪೇಟೆ, ಆಸಿಫ್ ಇಕ್ಬಾಲ್ ಫರಂಗಿಪೇಟೆ, ಆನಿಯಾ ದರ್ಬಾರ್ ಹಂಝ ಬಸ್ತಿಕೋಡಿ, ‌ಹಾಜಿ ಬಿ.ಎ.ಮುಹಮ್ಮದ್ ಬಂಟ್ವಾಳ, ಹಕೀಂ ಕಲಾಯಿ, ಬಿ.ಎಂ.ತುಂಬೆ, ಮಜೀದ್ ಕನ್ಯಾನ, ಇಬ್ರಾಹಿಂ ನವಾಝ್ ಬಡಕಬೈಲು ಮೊದಲಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!