January 31, 2026

ಮಂಜೇಶ್ವರ: ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ: ರೋಗಿಗಳು ಸಂಕಷ್ಟಕ್ಕೆ

0
IMG-20250503-WA0002.jpg

ಮಂಜೇಶ್ವರ: ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದಾಗಿ ರಾತ್ರಿ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಶನಿವಾರ ಸಭೆ ಸೇರಿದ ಆಸ್ಪತ್ರೆ ನಿರ್ವಹಣಾ ಸಮಿತಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಶುಕ್ರವಾರದಿಂದ ರಾತ್ರಿ ಸೇವೆಯನ್ನು ಸ್ಥಗಿತಗೊಳಿಸಲು ಈ ಹಿಂದೆ ತಿರ್ಮಾನಿಸಲಾಗಿದ್ದರೂ, ಈಗ ಕಾರ್ಯನಿರ್ವಹಿಸುವ ವೈದ್ಯರು ಅಧಿಕಾವಧಿ ಕೆಲಸ ಮಾಡುತ್ತಿದ್ದರು.

ಇಲ್ಲಿ ಒಟ್ಟು ಒಂಬತ್ತು ವೈದ್ಯರ ಹುದ್ದೆಗಳಿದ್ದು, ಇದೀಗ ಕೇವಲ ಮೂವರು ವೈದ್ಯರಿದ್ದಾರೆ. ನಾಲ್ವರು CMO ಗಳಲ್ಲಿ ಇಬ್ಬರು ಮತ್ತು ಸಹಾಯಕರಲ್ಲಿ ಮೂವರು. ಒಬ್ಬರೇ ಶಸ್ತ್ರಚಿಕಿತ್ಸಕರು ಇದ್ದಾರೆ. ಸೂಪರಿಂಟೆಂಡೆಂಟ್ ಹುದ್ದೆಯೂ ಖಾಲಿ ಇದೆ. ಹಿರಿಯ ಸಹಾಯಕ,‌ ಶಸ್ತ್ರಚಿಕಿತ್ಸಕರು ಸೂಪರಿಂಟೆಂಡೆಂಟ್ ಹುದ್ದೆಯನ್ನೂ ಹೊಂದಿದ್ದಾರೆ.

ತಾಲ್ಲೂಕಿನ ವಿವಿಧ ಭಾಗಗಳಿಂದ ಪ್ರತಿದಿನ 800 ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದಾರೆ.‌ ರಾತ್ರಿಯ ಸೇವೆಗಳನ್ನು ಸ್ಥಗಿತಗೊಳಿಸಿರುವುದರಿಂದ ರೋಗಿಗಳಿಗೆ ತೊಂದರೆಗೆ ಒಳಗಾಗಿದ್ದಾರೆ. ಎರಡು ವರ್ಷಗಳ ಹಿಂದೆ ರಾತ್ರಿ ಸೇವೆಯನ್ನು ಸ್ಥಗಿತಗೊಳಿಸಿದ ನಂತರ ಸ್ಥಳೀಯರ ನೇತೃತ್ವದಲ್ಲಿ ತೀವ್ರ ಪ್ರತಿಭಟನೆ ನಡೆದಿತ್ತು. ಪ್ರತಿಭಟನೆಯ ಹಿನ್ನಲೆಯಲ್ಲಿ ಚಿಕಿತ್ಸೆಯನ್ನು ಪುನರಾರಂಭಿಸಲಾಗಿತ್ತು. ಆಸ್ಪತ್ರೆ ರಾಷ್ಟ್ರೀಯ ಹೆದ್ದಾರಿಯ ಬಳಿ ಇರುವುದರಿಂದ ಅಪಘಾತಗಳು ಮತ್ತು ಇತರ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ಪಡೆಯಲು ಜನರು ಇದೇ ಆಸ್ಪತ್ರೆಯನ್ನು ಆಶ್ರಯಿಸುತ್ತಿದ್ದರು. ಇದೀಗ ರಾತ್ರಿ ಸೇವೆಗಳ ಕೊರತೆಯಿಂದಾಗಿ ರೋಗಿಗಳು ಈಗ ಮಂಗಳೂರು ಅಥವಾ ಕಾಸರಗೋಡಿಗೆ ಹೋಗುವುದು ಅನಿವಾರ್ಯವಾಗಿದೆ.

Leave a Reply

Your email address will not be published. Required fields are marked *

error: Content is protected !!