ಸುಳ್ಯ: ನಾಪತ್ತೆಯಾಗಿದ್ದ ಬಾಲಕ ಪತ್ತೆ

ಅರಂತೋಡು: ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಶಾಂತಿಮಜಲಿನಿಂದ ನಾಪತ್ತೆಯಾಗಿದ್ದ ಅನ್ವಿತ್ ಎಂಬ ಬಾಲಕ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ಅಜ್ಜಾವರದ ಭಜನಾ ಮಂದಿರದಲ್ಲಿ ಜ.23ರ ಗುರುವಾರ ಮುಂಜಾನೆ ಈತ ಪತ್ತೆಯಾಗಿದ್ದಾನೆ.
ಅಷ್ಪಂಗಾಯ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಈತ ಜ.22ರ ಬುಧವಾರ ಮಧ್ಯಾಹ್ನ ನಂತರ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು.
ಅನ್ವಿತ್ ಮೂಲತ ಪುತ್ತೂರು ತಾಲೂಕಿನ ಈಶ್ವರಮಂಗಳ ನಿವಾಸಿಯಾಗಿದ್ದು, ತನ್ನ ಅಜ್ಜಿ ಮನೆಯಾದ ಶಾಂತಿಮೂಲೆಯಿಂದ ಶಾಲೆಗೆ ಹೋಗುತ್ತಿದ್ದಾನೆ.
ಬಾಲಕ ನಾಪತ್ತೆಯಾಗಿರುವ ಬಗ್ಗೆ ಸುಳ್ಯ ಪೋ ಠಾಣೆಗೆ ದೂರು ನೀಡಲಾಗಿತ್ತು.