ಹಠಾತ್ ಎದೆ ನೋವು: ಬೇಲೇಕೇರಿ ಖಾರ್ವಿವಾಡದ ಮುಖ್ಯಾಧ್ಯಾಪಕ ಮೃತ್ಯು
ಅಂಕೋಲಾ : ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೇಲೇಕೇರಿ ಖಾರ್ವಿವಾಡದ ಮುಖ್ಯಾಧ್ಯಾಪಕರಾಗಿದ್ದ ಮಧುಕರ್ ಪಿ ಕೇಣಿ ಅಕಾಲಿಕವಾಗಿ ವಿಧಿವಶರಾಗಿದ್ದಾರೆ.
ಪಟ್ಟಣ ವ್ಯಾಪ್ತಿಯ ಕೇಣಿ ನಿವಾಸಿಯಾಗಿದ್ದ ಇವರಿಗೆ ಶನಿವಾರ ಹಠಾತ್ ಎದೆ ನೋವು ಕಾಣಿಸಿಕೊಂಡು , ಚಿಕಿತ್ಸೆಗಾಗಿ ಪಕ್ಕದ ಜಿಲ್ಲೆಯ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿಮಧ್ಯೆ ಹೊನ್ನಾವರದ ಬಳಿ ಕೊನೆ ಉಸಿರೆಳೆದರು ಎನ್ನಲಾಗಿದೆ.




