ವಿಟ್ಲ: ಮರ್ಹೂಂ ಹಬೀಬ್ ಉಕ್ಕುಡ ಸ್ಮರಣಾರ್ಥ ನಾಳೆ ಆ್ಯಂಬುಲೆನ್ಸ್ ಲೋಕಾರ್ಪಣೆ
ವಿಟ್ಲ: ಖಲೀಫಾ ಚಾರಿಟೇಬಲ್ ಟ್ರಸ್ಟ್ ಉಕ್ಕುಡ ದರ್ಬೆ ಆಶ್ರಯದಲ್ಲಿ ಮರ್ಹೂಂ ಹಬೀಬ್ ಉಕ್ಕುಡ ಸ್ಮರಣಾರ್ಥ ಆಂಬುಲೆನ್ಸ್ ಲೋಕಾರ್ಪಣೆ ಸಮಾರಂಭ ಅ.13ರ. ಭಾನುವಾರ ಉಕ್ಕುಡ ದರ್ಬೆ ಜಂಕ್ಷನ್ ನಲ್ಲಿ ನಡೆಯಲಿದೆ.
ಹಾಫಿಳ್ ಅಹ್ಮದ್ ಶರೀಫ್ ಕಾಮಿಲ್ ಸಖಾಫಿ ಅಲ್ ಹಿಕಮಿ ಮಳಲಿ ಉದ್ಘಾಟಿಸಲಿದ್ದಾರೆ. ಟ್ರಸ್ಟ್ ನ ಅಧ್ಯಕ್ಷ ಮುನೀರ್ ದರ್ಬೆ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಗೀತಪ್ರಕಾಶ್,
ಯು.ಪಿ ಜಯರಾಮ, ಎಂ ಎಸ್ ಮಹಮ್ಮದ್, ಝೈನುದ್ದೀನ್ ಎನ್ ಎಸ್, ಹಮೀದ್ ಹಾಜಿ ದರ್ಖಾಸ್, ಪದ್ಮನಾಭ ಅಳಿಕೆ, ಹನೀಫ್ ಟಿ.ಎಚ್ ಎಂ ಎ, ಐತಪ್ಪ ನಾಯ್ಕ, ಅಝೀಜ್ ಹೋಟೆಲ್ ದರ್ಭೆ ಮೊದಲಾದವರು ಭಾಗವಹಿಸಲಿದ್ದಾರೆ.




