ವಿಟ್ಲ: ದಾರುನ್ನಜಾತ್ ಎಜುಕೇಶನಲ್ ಸೆಂಟರ್ ನಲ್ಲಿ ಆಂಡ್ ನೇರ್ಚೆ ಪ್ರಯುಕ್ತ ಲೀಡರ್ಸ್ ಮೀಟ್ -ಸ್ವಾಗತ ಸಮಿತಿ ರಚನೆ
ವಿಟ್ಲ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಟಿಪ್ಪು ನಗರ ಸಂಸ್ಥೆಯ ವತಿಯಿಂದ ಸಂಸ್ಥೆಯ ಶಿಲ್ಪಿ ಮರ್ಹೂಂ ಶೈಖುನಾ ಅಬೂಬಕ್ಕರ್ ಉಸ್ತಾದ್ 5 ನೆ ಅಂಡ್ ನೇರ್ಚೆ ಪ್ರಯುಕ್ತ ತಾರೀಕು 4/8/2024 ಆದಿತ್ಯವಾರ ಸಂಜೆ 4 ಗಂಟೆಗೆ ಸರಿಯಾಗಿ ಸಂಸ್ಥೆಯ ಅಧ್ಯಕ್ಷರಾದ ಶೈಖುನಾ ವಾಲೆಮುಂಡೋವು ಉಸ್ತಾದ್ ಅಧ್ಯಕ್ಷತೆಯಲ್ಲಿ ಲೀಡರ್ಸ್ ಮೀಟ್ ಕಾರ್ಯಕ್ರಮ ಜರಗಿತು.
ಮರ್ಹೂಂ ಶೈಖುನಾ ಅಬೂಬಕ್ಕರ್ ಉಸ್ತಾದ್ ನೆರ್ಚೆ ಸೆಪ್ಟೆಂಬರ್ 7 ತಾರೀಕಿಗೆ ಜರಗಳಿದ್ದು ಈ ಸಂದರ್ಭದಲ್ಲಿ ಕಾರ್ಯಕ್ರಮದ ಸ್ವಾಗತ ಸಮಿತಿ ರಚಿಸಲಾಯಿತು ಕಾರ್ಯಕ್ರಮವನ್ನು ಅಸಯ್ಯದ್ ಶಮೀಮ್ ತಂಙಳ್ ಉದ್ಘಾಟಿಸಿದರು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಸಖಾಫಿ ವಿಷಯ ಮಂಡಿಸಿದರು . ಪ್ರಸ್ತುತ ಈ ಕಾರ್ಯಕ್ರಮದಲ್ಲಿ ಅಬೂಬಕ್ಕರ್ ಹಾಜಿ ಹೊಸಂಗಡಿ ಮಜಿಲಿಸ್ ದಾರುನ್ನಜಾತ್ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಖಾಫಿ ಸಾಮಾಜಿಕ ಕಾರ್ಯಕರ್ತರಾದ ಅನೀಫ್ ಬಗ್ಗು ಮೂಲೆ ಸಾಕೀರ್ ಅಳಕ್ಕೆಮಜಳ್ ಕಾಸಿಂ ಸಕಾಫಿ ಅಳಕೆ ಮಜಲ್ಜಳ ಸಿದ್ದಿಕ್ ಮುಸ್ಲಿಆರ್ ಟಿಪ್ಪು ನಗರ ಡಾ ಅಸೈನರ್ ಟಿಪ್ಪು ನಗರ ಮುಸ್ಲಿಂ ಜಮಾತ್ ಕೋಶಾಧಿಕಾರಿ ಮೋಂಚ ಟಿಪ್ಪು ನಗರ ಅಬ್ದುಲ್ ರೆಹಮಾನ್ ಟಿಪ್ಪು ನಗರ ಇಬ್ರಾಹಿಂ ಟಿಪ್ಪು ನಗರ ಅಬ್ಬಾಸ್ ಟಿಪ್ಪು ನಗರ ಪಟ್ಟನಪಂಚಾಯತ್ ಸದಸ್ಯರಾದ ಅಸೇನಾರ್ ನೆಲ್ಲಿಗುಡ್ಡೆ ಸಿರಾಜ್ ಕೆಸಿರೋಡು ಆಫಿಲ್ ಷರೀಫ್ ಮುಸ್ಲಿಯರ್ ರಜಾಕ್ ಸಹದಿ ಕೊಡಿಪ್ಪಾಡಿ ಅಬೂಬಕ್ಕರ್ ಹಾಜಿ ಕಡಂಬುSYS ವಿಟ್ಲ ಝೋನ್ ಕಾರ್ಯದರ್ಶಿ ರಹಿಮ್ ಸಖಾಫಿ ಇಸ್ಮಾಯಿಲ್ ಮಾಸ್ಟರ್ ಮಂಗಳ ಪದವು SMS ಜಿಲ್ಲಾ ಅಧ್ಯಕ್ಷರಾದ ಯೂಸುಫ್ ಸಾಜ ಶಿಹಬುದ್ದೀನ್ ಸಖಾಫಿ ಉಮರ್ ವಿಟ್ಲ ರಜಾಕ್ ಪುಂಡಡ್ಕ ಸುಲೇಮಾನ್ ಮುಸ್ಲಿಯರ್ ಸೌದಿ ಅಬ್ದುಲ್ ಖಾದರ್ ಕೊಡಂಗಾಯಿ ಸುಲೇಮಾನ್ ಕೊಡಂಗಾಯಿ ಉಪಸ್ಥಿತರಿದ್ದರು
ಆಂಡ್ ನೇರ್ಚೆ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಅಬ್ದುಲ್ ಹಕ್ಕಿಮ್ ಶಾಂತಿನಗರ ಕನ್ವೀನರಾಗಿ ಇಬ್ರಾಹಿಂ ಮುಸ್ಲಿ ಯಾರು ಟಿಪ್ಪು ನಗರ ಅಬ್ಬಾಸ್ ಮದನಿ ಕೊಡಂಗಾಯಿ ಕೋಶಾಧಿಕಾರಿ ಯೂಸಫ್ ಸಾಜ ಹಾಗೂ 40 ಮಂದಿಯ ಸ್ವಾಗತ ಸಮಿತಿ ರಚಿಸಲಾಯಿತು ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಹಮೀದ್ ಹಾಜಿ ಸ್ವಾಗತಿಸಿದರು
ಅಸಯ್ಯದ್ ಸಿಹಬುದ್ದೀನ್ ತಙಲ್ ಕೊನೆಯಲ್ಲಿ ಪ್ರಾರ್ಥನೆ ನಡೆಸಿದರು