ಕೊಳ್ನಾಡು: ನಿರಂತರ ಎಡಬಿಡದೆ ಸುರಿದ ಮಳೆಯಿಂದಾಗಿ ಹಾನಿ: ಕೊಳ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ವಾರ್ಡ್ ಗಳಿಗೆ ಕುಳಾಲ್ ಸುಭಾಶ್ಚಂದ್ರ ಶೆಟ್ಟಿ, ಅಧ್ಯಕ್ಷ ಅಶ್ರಫ್ ಸಾಲೆತ್ತೂರು ಭೇಟಿ, ಪರಿಶೀಲನೆ, ಶೀಘ್ರ ಕಾಮಾಗಾರಿಗೆ ಸೂಚನೆ
ವಿಟ್ಲ: ಭಾರೀ ಮಳೆಗೆ ತತ್ತರಿಸಿ ಪ್ರಾಕೃತಿಕ ವಿಕೋಪಗಳಿಗೆ ತುತ್ತಾದ ಕೊಳ್ನಾಡು ಗ್ರಾ.ಪಂಚಾಯತ್ ವ್ಯಾಪ್ತಿಯ ವಿವಿದೆಡೆಗೆ ಸಾಲೆತ್ತೂರು,ನಾಟೆಕಲ್ಲು,ಮಾದಕಟ್ಟೆ ವಾರ್ಡಿನ ಬಾರೆಬೆಟ್ಟು,ತಾಳಿತ್ತನೂಜಿ-ನಾರ್ಶ,ಸುರಿಬೈಲ್ ಸೇರಿದಂತೆ ಅತೀಹೆಚ್ಚು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು.
ಅಲ್ಲದೆ ತಾಳಿತ್ತನೂಜಿ ನಾರ್ಶ ಶಿಕ್ಷಣ ಸಂಸ್ಥೆಯ ಪ್ರೌಡಶಾಲಾ ವಿಭಾಗದ ಅನ್ನದಾಸೋಹ ಕಟ್ಟಡ ಮಳೆಗೆ ಹಾನಿಯಾಗಿದ್ದು, ಸುತ್ತಮುತ್ತಲಿನ ಮರಗಿಡಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ಸೂಚಿಸಿ ಹಾನಿಗೊಳಗಾದ ಕಟ್ಟಡ ಸರಿಪಡಿಸುವಂತೆ ಸೂಚಿಸಲಾಯಿತು. ಪದವಿಪೂರ್ವ ಕಟ್ಟಡಗಳ ಸಣ್ಣಪುಟ್ಟ ಕಾಮಾಗಾರಿ, ಅಂಗನವಾಡಿ ಕಟ್ಟಡದ ಉಳಿದ ಕಾಮಾಗಾರಿ ಸೇರಿದಂತೆ ಹಂತಹಂತವಾಗಿ ಮಾಡುವಂತೆ ಸೂಚಿಸಲಾಯಿತು. ನಂತರ ಸುರಿಬೈಲ್ ಶಾಲೆಗೆ ಭೇಟಿ ನೀಡಿ ಅವಹಾಲು ಸ್ವೀಕರಿಸಲಾಯಿತು. ಅಲ್ಲದೇ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆಗಳಿಗೆ ಗುಡ್ಡಜರಿದು ಮಣ್ಣುಬಿದ್ದಿದ್ದು, ಜೆಸಿಬಿಯ ಮೂಲಕ ಕೆಲಸಕಾರ್ಯಗಳನ್ನು ನಡೆಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಕೊಳ್ನಾಡು ಗ್ರಾ.ಪಂಚಾಯತ್, ಮಾಜಿ ಸದಸ್ಯರಾದ ಪವಿತ್ರ ಪೂಂಜ,ಹಸೈನಾರ್ ತಾಳಿತ್ತನೂಜಿ, ಗುತ್ತಿಗೆದಾರ ಅಶ್ರಪ್ ಉಪಸ್ಥಿತರಿದ್ದರು.





