ಕೊಡ್ಲಿಪೇಟೆ-ಸಕಲೇಶಪುರ ರಸ್ತೆಯಲ್ಲಿ KSRTC ಬಸ್, ಕಾರಿನ ನಡುವೆ ಅಪಘಾತ
ಕೊಡ್ಲಿಪೇಟೆ -ಸಕಲೇಶಪುರ ಮುಖ್ಯ ರಸ್ತೆಯ ಶಾಂತಪುರ ಡೌನ್ ನಲ್ಲಿ ಸೇತುವೆ ಬಳಿ ಇಂದು ಘಟನೆ ನಡೆದಿದೆ.
ಕೊಡ್ಲಿಪೇಟೆಯಿಂದ ಕಾಗನೂರಿಗೆ ಹೋಗುತ್ತಿದ್ದ ಕಾರು, ಚಿಕ್ಕಮಂಗಳೂರುದಿಂದ ಮಡಿಕೇರಿಗೆ ಬರುತ್ತಿದ್ದ KSRTC ಬಸ್ ಢಿಕ್ಕಿಯಾಗಿದೆ.
ಕೊಡ್ಲಿಪೇಟೆ ಪೊಲೀಸ್ ಠಾಣೆಯ ಪೊಲೀಸರಿಂದ ಸ್ಥಳಕ್ಕೆ ಪೊಲೀಸ್ ಮಹಜರು ನಡೆಸಿದರು. ಗಾಯಾಳುಗಳನ್ನು ಕೊಡ್ಲಿಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಹಾಸನದ ಆಸ್ಪತ್ರೆಗೆ ಸಾಗಿಸಲಾಗಿದೆ.




