March 17, 2026

ಮಂಗಳೂರು: ಬ್ಯಾಗ್‌ನಲ್ಲಿದ್ದ 6 ಲಕ್ಷ ರೂ. ನಗದು ಕಳವು: ಆರೋಪ

0
image_editor_output_image954429550-1718872907340.jpg

ಮಂಗಳೂರು: ಮಂಜೇಶ್ವರದ ಬದ್ರುದ್ದೀನ್ ಕದಂಬಾರ್ ಈಚೆಗೆ ಉಮ್ರಾ ಯಾತ್ರೆ ಸಲುವಾಗಿ ವಿಮಾನ ಯಾನ ಕೈಗೊಂಡಾಗ ಅವರ ಬ್ಯಾಗ್‌ನಲ್ಲಿದ್ದ ಸೌದಿ ಅರೇಬಿಯಾದ 26,432 ರಿಯಾಲ್ (ಭಾರತೀಯ ಮೌಲ್ಯ ಸುಮಾರು ₹ 6 ಲಕ್ಷ ) ನಗದು ಕಳವಾಗಿದೆ. ಈ ಬಗ್ಗೆ ದೂರು ನೀಡಿದ್ದರೂ ಆರೋಪಿಗಳ ಪತ್ತೆಗೆ ಕ್ರಮವಾಗಿಲ್ಲ ಎಂದು ತುಳುನಾಡ ರಕ್ಷಣಾ ವೇದಿಕೆ ಆರೋಪಿಸಿದೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಈ ಕುರಿತು ಮಾಹಿತಿ ನೀಡಿದ ಬದ್ರುದ್ದೀನ್, ‘ನಾನು 25 ವರ್ಷ ಸೌದಿಯಲ್ಲಿ ಕೆಲಸ ಮಾಡಿದ್ದು, ಅಲ್ಲಿನ ಪ್ರದೇಶಗಳ ಪರಿಚಯವಿದೆ. ಅರೇಬಿಕ್ ಭಾಷೆಯೂ ತಿಳಿದಿದೆ. ಇಲ್ಲಿಂದ ಉಮ್ರಾ ಯಾತ್ರೆ ಕೈಗೊಂಡ 11 ಪ್ರಯಾಣಿಕರ ಜೊತೆ ನನ್ನನ್ನು ಮಾರ್ಗದರ್ಶಕನಾಗಿ ಅತ್ತಾವರದ ಅಜ್ಯಾದ್ ಟ್ರಾವೆಲ್ಸ್ ಮಾಲೀಕ ಇಟ್ಬಾಲ್ ಕಳುಹಿಸಿದ್ದರು’ ಎಂದು ತಿಳಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!