October 22, 2024

ರಾತ್ರಿ ವೇಳೆ ವಾಹನಗಳನ್ನು ತಡೆದು ದರೋಡೆ ಮಾಡುತ್ತಿದ್ದ ಕಳ್ಳರ ಬಂಧನ

0

ಯಾದಗಿರಿ: ರಾತ್ರಿ ವೇಳೆ ವಾಹನಗಳನ್ನು ತಡೆದು ದರೋಡೆ ಮಾಡುತ್ತಿದ್ದ ಮೂವರು ಖತರ್ನಾಕ್ ಕಳ್ಳರನ್ನು ಕೆಂಭಾವಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ರಾಜು ಕರ್ನಾಳ, ಶಿವು ಹಳ್ಳೇಪ್ಪ ಹಾಗೂ ಸುನೀಲ್ ದೊಡ್ಡಮನಿ ಗುರುತಿಸಲಾಗಿದೆ.

ಆರೋಪಿಗಳು ಸುರಪುರದ ನಗನೂರ ಹಾಗೂ ಕೆಂಭಾವಿ ಮಾರ್ಗ ಮಧ್ಯೆ ರಾತ್ರಿ ವೇಳೆ ಬೈಕ್‍ನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರನ್ನು ಬೆದರಿಸಿ ಅವರಿಂದ ಹಣ ದೋಚುತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!