ಹೆಜ್ಜೇನು ದಾಳಿ: ಪತಿ ಸಾವು, ಪತ್ನಿ ಗಂಭೀರ
ಚಾಮರಾಜನಗರ: ಹೆಜ್ಜೇನು ದಾಳಿಯಿಂದ ಪತ್ನಿಗೆ ಗಂಭೀರ ಗಾಯಗಳಾಗಿದ್ದರೆ, ಪತಿ ಸಾವನ್ನಪ್ಪಿರುವಂಹ ಘಟನೆ ಜಿಲ್ಲೆಯ ಹನೂರು ತಾಲೂಕಿನ ಬೆಳತ್ತೂರು ಗ್ರಾಮದಲ್ಲಿ ನಡೆದಿದೆ.
ಬಾಳೆ ಬೆಳೆಗೆ ಕೀಟನಾಶಕ ಸಿಂಪಡಿಸುತ್ತಿದ್ದಾಗ ಹೆಜ್ಜೇನು ದಾಳಿ ಮಾಡಿದ್ದು ದುರಂತ ಸಂಭವಿಸಿದೆ. ತುಳಸಿದಾಸ್(45) ಮೃತ ಪತಿ.
ಪತ್ನಿ ಆಶಾಗೆ ಗಂಭೀರ ಗಾಯಗಳಾಗಿದ್ದು, ಹನೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.




