December 15, 2025

ಉಡುಪಿ: ದೇವಸ್ಥಾನಕ್ಕೆಂದು ಹೋದ ವಿದ್ಯಾರ್ಥಿ ನಾಪತ್ತೆ

0
image_editor_output_image-66039142-1716010518798.jpg

ಉಡುಪಿ: ಕಲ್ಮಾಡಿ ಬಂಕೇರ್ ಕಟ್ಟ ನಿವಾಸಿ ಕವಿತಾ ಸುದರ್ಶನ್ ರವರ ಪುತ್ರ ವರುಣ್ (17) ಅಂಬಲಪಾಡಿ ದೇವಸ್ಥಾನಕ್ಕೆಂದು ಹೋದವನು ಮನೆಗೆ ಹಿಂದಿರುಗಿರುವುದಿಲ್ಲ.

ಕರಾವಳಿ ಬೈಪಾಸ್ ಬಳಿ ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಹುಡುಗನನ್ನು ಕಂಡವರಿದ್ದಾರೆ. ಯಾರಾದರೂ ಈ ಹುಡುಗನನ್ನು ಕಂಡರೆ ಆಪತ್ಭಾಂಧವ ಈಶ್ವರ್ ಮಲ್ಪೆ 9663434415 ಅಥವಾ ಮನೆಯವರು 9964463502 ಈ ಸಂಖ್ಯೆಗೆ ಕರೆಮಾಡಿ ತಿಳಿಸಲು ಕೋರಿದ್ದಾರೆ.

ಈ ಹುಡುಗ ಮೌನಿಯಾಗಿದ್ದು ಮಾತನಾಡುವುದು ಕಡಿಮೆಯಾಗಿರುತ್ತದೆ. ಹಾಗಾಗಿ ಎಲ್ಲಾದರೂ ಒಬ್ಬನೇ ತನ್ನಷ್ಟಕ್ಕೆ ಕುಳಿತಿರಬಹುದು ಎಂದು ಹೇಳಲಾಗಿದೆ. ಸಾರ್ವಜನಿಕರು ಕಂಡಲ್ಲಿ ಮಾಹಿತಿ ನೀಡಲು ವಿನಂತಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!