March 17, 2026

ಕಾಪು: ಟಿಪ್ಪರ್‌ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ

0
image_editor_output_image635368830-1713940640832.jpg

ಕಾಪು: ಟಿಪ್ಪರ್‌ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದನ್ನು ಉದ್ಯಾವರ ಚೆಕ್‌ಪೋಸ್ಟ್‌ ಬಳಿ ಚುನಾವಣ ಕರ್ತವ್ಯ ನಿರತ ಸಿಬಂದಿ ಪತ್ತೆ ಹಚ್ಚಿದ್ದಾರೆ.

ಉದ್ಯಾವರ ಚೆಕ್‌ಪೋಸ್ಟ್‌ನಲ್ಲಿ ಉಡುಪಿ ಕಡೆಗೆ ಬಂದ ಟಿಪ್ಪರ್‌ ಲಾರಿಯನ್ನು ಪರಿಶೀಲಿಸಿದಾಗ ವಾಹನದಲ್ಲಿ 1 ಯುನಿಟ್‌ನಷ್ಟು ಮರಳು ಇರುವುದು ಪತ್ತೆಯಾಗಿತ್ತು.

ಈ ಬಗ್ಗೆ ವಾಹನದ ಚಾಲಕನಲ್ಲಿ ಮರಳು ಮತ್ತು ವಾಹನದ ಪರವಾನಿಗೆ ಬಗ್ಗೆ ಕೇಳಿದಾಗ ವಾಹನವು ಪ್ರಭಾಕರ್‌ ಅವರಿಗೆ ಸೇರಿದ್ದಾಗಿದ್ದು ಅವರ ಸಹೋದರ ಹರೀಶ ಅವರ ಹೊಸ ಮನೆ ನಿರ್ಮಾಣ ಕಾಮಗಾರಿಯಿಂದ ಉಳಿದ ಮರಳನ್ನು ಉದ್ಯಾವರ ಬೊಳೆಗೆ ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ್ದ.

ಈ ಸಂಬಂಧ ಬಾಗಲಕೋಟೆ ಮೂಲದ ಟಿಪ್ಪರ್‌ ಚಾಲಕ ಶಿವಾನಂದ ಬಿ. ನೇಕಾರನನ್ನು ವಶಕ್ಕೆ ತೆಗೆದುಕೊಂಡಿರುವ ಅಧಿಕಾರಿಗಳು ಟಿಪ್ಪರ್‌ ಲಾರಿ ಸಹಿತ ಮರಳನ್ನು ಕಾಪು ಪೊಲೀಸ್‌ ಠಾಣೆಗೆ ಹಸ್ತಾಂತರಿಸಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!