March 17, 2026

ಉಪ್ಪಿನಂಗಡಿ: ಬಾರ್ಯ ಗ್ರಾಮ ಪಂಚಾಯತ್‌ ಸಿಬ್ಬಂದಿ ಆತ್ಮಹತ್ಯೆ

0
image_editor_output_image-1596150860-1713940819740.jpg

ಉಪ್ಪಿನಂಗಡಿ ಇಲ್ಲಿನ ಬಾರ್ಯ ಗ್ರಾಮದ ಪೆರಿಯೊಟ್ಟು ನಿವಾಸಿ, ಬಾರ್ಯ ಗ್ರಾಮ ಪಂಚಾಯತ್‌ ಸಿಬಂದಿ ಗಣೇಶ್‌ ಯಾನೆ ಕುಶಾಲಪ್ಪ (38) ವಿಷ ಸೇವಿಸಿ ಆತ್ಮಹತ್ಯೆಗೈದ ಘಟನೆ ವರದಿಯಾಗಿದೆ.

ಕಳೆದ 19 ವರ್ಷಗಳಿಂದ ಬಾರ್ಯ ಗ್ರಾಮ ಪಂಚಾಯತ್‌ ಉದ್ಯೋಗಿಯಾಗಿದ್ದು, ಎ. 22ರಂದು ತನ್ನ ಮನೆ ಸಮೀಪ ವಿಷ ಸೇವಿಸಿ ಅಸ್ವಸ್ಥರಾಗಿದ್ದರು. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫ‌ಲಿಸದೆ ಎ. 23ರಂದು ಮೃತಪಟ್ಟರು.

ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ

Leave a Reply

Your email address will not be published. Required fields are marked *

You may have missed

error: Content is protected !!