ಎಸ್ಡಿಪಿಐ ಜೊತೆ ಯಾವುದೇ ಹೊಂದಾಣಿಕೆ ಇಲ್ಲ: ರಮಾನಾಥ ರೈ
ಪುತ್ತೂರು: ಕಾಂಗ್ರೇಸ್ ಜೊತೆ ಎಸ್.ಡಿ.ಪಿ.ಐ ಹೊಂದಾಣಿಕೆ ಮಾಡಿಕೊಂಡಿದೆ ಎಂಬ ಆರೋಪವನ್ನು ಕಾಂಗ್ರೇಸ್ ಹಿರಿಯ ಮುಖಂಡ ರಮಾನಾಥ ರೈ ತಳ್ಳಿಹಾಕಿದ್ದಾರೆ.
ಪುತ್ತೂರಿನಲ್ಲಿ ಮಾತನಾಡಿದ ಅವರು ಎಸ್ ಡಿಪಿಐ ಈ ಬಾರಿ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡದೇ ಇರಬಹುದು, ಅಂದ ಮಾತ್ರಕ್ಕೆ ಕಾಂಗ್ರೇಸ್ ಜೊತೆ ಹೊಂದಾಣಿಕೆಯಾಗಿದೆ ಎಂದಲ್ಲ, ಹೊಂದಾಣಿಕೆ ಆಗಬೇಕಾದರೆ ಅವರೊಂದಿಗೆ ಸೀಟ್ ಶೇರಿಂಗ್ ಆಗಬೇಕು, ಸೀಟುಗಳ ಕೊಡು ಕೊಳ್ಳುವಿಕೆ ನಡೆಯಬೇಕು ಆದರೆ ಇಂಥ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ, ಇದೆಲ್ಲಾ ಬಿಜೆಪಿಯವರ ಅಪಪ್ರಚಾರವಾಗಿದ್ದು, ನಮಗೆ ಎಲ್ಲರ ಮತವೂ ಬೇಕು ಎಂದರು.




