ರಮಝಾನ್ ಕಿಟ್ ಕೊಡಿಸುವುದಾಗಿ ಹೇಳಿ ದಂಪತಿಯ ಚಿನ್ನ, ನಗದು ಎರಗಿಸಿ ಪರಾರಿ
ಬೆಂಗಳೂರು: ರಮಝಾನ್ ಕಿಟ್ ಕೊಡಿಸುವುದಾಗಿ ಹೇಳಿ ದಂಪತಿಯನ್ನು ಕರೆದುಕೊಂಡು ಹೋಗಿ ಚಾಕು ತೋರಿಸಿ ಮೈಮೇಲಿದ್ದ 21 ಗ್ರಾಂ ಚಿನ್ನ ಹಾಗೂ 9 ಸಾವಿರ ರೂ. ನಗದು ಹಣವನ್ನು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.
ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಂಜಾನ್ ಕಿಟ್ ಕೊಡಿಸುವ ಹೆಸರಲ್ಲಿ ರಾಬರಿ ಮಾಡಾಲಾಗಿದೆ.
ಇತ್ತೀಚೆಗೆ ಜೈಲಿನಿಂದ ರಿಲೀಸ್ ಆಗಿದ್ದ ಅಬ್ದುಲ್ಲಾ ಎಂಬಾತನಿಂದ ಕೃತ್ಯ ಎಸಗಲಾಗಿದೆ. ಈ ಹಿಂದೆಯೂ ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇದೇ ರೀತಿ ರಾಬರಿ ಮಾಡಿದ್ದ ಆರೋಪಿ ಅಬ್ದುಲ್ಲಾ ಜೈಲು ಸೇರಿದ್ದನು. ಕಳೆದ ತಿಂಗಳು 26 ರಂದು ಜೈಲಿಂದ ರಿಲೀಸ್ ಆಗಿದ್ದನು.




