March 17, 2026

ರಮಝಾನ್ ಕಿಟ್‌ ಕೊಡಿಸುವುದಾಗಿ ಹೇಳಿ ದಂಪತಿಯ ಚಿನ್ನ, ನಗದು ಎರಗಿಸಿ ಪರಾರಿ

0
image_editor_output_image-1511577438-1712179369143.jpg

ಬೆಂಗಳೂರು: ರಮಝಾನ್ ಕಿಟ್‌ ಕೊಡಿಸುವುದಾಗಿ ಹೇಳಿ ದಂಪತಿಯನ್ನು ಕರೆದುಕೊಂಡು ಹೋಗಿ ಚಾಕು ತೋರಿಸಿ ಮೈಮೇಲಿದ್ದ 21 ಗ್ರಾಂ ಚಿನ್ನ ಹಾಗೂ 9 ಸಾವಿರ ರೂ. ನಗದು ಹಣವನ್ನು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.

ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಂಜಾನ್ ಕಿಟ್ ಕೊಡಿಸುವ ಹೆಸರಲ್ಲಿ ರಾಬರಿ ಮಾಡಾಲಾಗಿದೆ.

ಇತ್ತೀಚೆಗೆ ಜೈಲಿನಿಂದ ರಿಲೀಸ್ ಆಗಿದ್ದ ಅಬ್ದುಲ್ಲಾ ಎಂಬಾತನಿಂದ ಕೃತ್ಯ ಎಸಗಲಾಗಿದೆ. ಈ ಹಿಂದೆಯೂ ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇದೇ ರೀತಿ ರಾಬರಿ ಮಾಡಿದ್ದ ಆರೋಪಿ ಅಬ್ದುಲ್ಲಾ ಜೈಲು ಸೇರಿದ್ದನು. ಕಳೆದ ತಿಂಗಳು 26 ರಂದು ಜೈಲಿಂದ ರಿಲೀಸ್ ಆಗಿದ್ದನು.

Leave a Reply

Your email address will not be published. Required fields are marked *

You may have missed

error: Content is protected !!