ಮಂಗಳೂರು: ಪ್ರವೀಣ್ ಪೂಜಾರಿ ಸಹಿತ 7 ಮಂದಿ ಆರೋಪಿಗಳ ಗಡಿಪಾರು
ಮಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಯಲ್ಲಿ ಏಳು ಮಂದಿಯನ್ನು ಗಡಿಪಾರು ಮಾಡಲಾಗಿದೆ. ಚುನಾವಣೆಯನ್ನು ಶಾಂತಿಯುತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಸಾರ್ವಜನಿಕ ಶಾಂತಿ ಕಾಪಾಡುವ ಸಲುವಾಗಿ, ಪದೇ ಪದೇ ಅಪರಾಧಿ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಏಳು ಮಂದಿಯನ್ನು ಗಡಿಪಾರು ಮಾಡಿ ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಆದೇಶಿಸಿದ್ದಾರೆ. ಈ ಏಳು ಮಂದಿ ಮೂರು ತಿಂಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸುವಂತಿಲ್ಲ’ ಎಂದು ಅವರು ತಿಳಿಸಿದ್ದಾರೆ.
ಅಶೋಕನಗರದ ಕೋಡಿಕಲ್ ಅಂಗಡಿಗುಡ್ಡೆಯ ಪ್ರೀತಂ ಅಲಿಯಾಸ್ ಅಭಿಲಾಷ್, ಉರ್ವದ ಸಿಪಿಸಿ ಕಂಪೌಂಡ್ ಬಳಿಯ ನಿವಾಸಿ ಹೇಮಂತ್ ಅಲಿಯಾಸ್ ಸೋನು, ಕೋಟೆಕಾರ್ ಕುಂಪಲದ ಶಿವರಾಜ್ ಅಲಿಯಾಸ್ ಶಿವು, ಸೋಮೇಶ್ವರ ಪಿಲಾರ್ನ ಎಡ್ವಿನ್ ರಾಹುಲ್ ಡಿಸೋಜ ಅಲಿಯಾಸ್ ರಾಹುಲ್, ಉಳ್ಳಾಲ ಮೇಲಂಗಡಿಯ ಇಬ್ರಾಹಿಂ, ಕೋಡಿಕಲ್ ನಿವಾಸಿ ಪ್ರವೀಣ್ ಪೂಜಾರಿ, ದೇರಳಕಟ್ಟೆಯ ಮೊಹಮ್ಮದ್ ಮುಸ್ತಫ ಅಲಿಯಾಸ್ ಮುಸ್ತಫ ಗಡಿಪಾರಿಗೆ ಒಳಗಾದವರು.





