September 20, 2024

ವಿಟ್ಲ: ಭರ್ಜರಿ ಸ್ಪೆಷಲ್ ಗಿಫ್ಟ್ ಗಳ ಜೊತೆ ಸ್ವಿಫ್ಟ್ ಕಾರು ಬಿಡುಗಡೆಗೊಳಿಸಿದ ಸ್ಮಾರ್ಟ್ ಇಂಡಿಯಾ 0.1

0

ವಿಟ್ಲ: ಎಂಜಿಆರ್ ಕಾರ್ಪೋರೇಷನ್ ಪ್ರಸ್ತುತ ಪಡಿಸುತ್ತಿರುವ ಸ್ಮಾರ್ಟ್ ಇಂಡಿಯಾ 0.1 ಉಳಿತಾಯ ಯೋಜನೆಯ ಮೊದಲನೇ ಡ್ರಾ ಅತ್ಯಂತ ಪಾರದರ್ಶಕವಾಗಿ ನಡೆದು ಐವರು ಅದೃಷ್ಟಶಾಲಿಗಳು ಕೇವಲ 1000₹ ಕಟ್ಟಿ ಆಕ್ಟಿವಾ ಹೋಂಡಾ ತಮ್ಮದಾಗಿಸಿಕೊಂಡಿದ್ದಾರೆ.

ಕೊಡಗಿನ ಕುಶಾಲನಗರದ ವಿಜಯಕುಮಾರ್, ವಿಟ್ಲ ಪಟ್ಟಣದ ವಿನಾಯಕ ಹೋಟೇಲ್ ಮಾಲೀಕರಾದ ನಾರಾಯಣ ನಾಯಕ, ಒಕ್ಕೆತ್ತೂರಿನ ಅಬ್ದುಲ್ ರಹಿಮಾನ್, ಕೇರಳ ಬಾಯಾರಿನ ಎ.ಕೆ ಸಿದ್ದೀಕ್ ಹಾಗೂ ಕಂಬಳಬೆಟ್ಟುವಿನ ಉಮ್ಮರ್ ಕುಂಞ ಆಕ್ಟಿವಾ ಹೋಂಡಾ ಗೆದ್ದ ಅದೃಷ್ಟಶಾಲಿಗಳು. ಇವರೊಂದಿಗೆ 20 ಮಂದಿ ಬಂಗಾರದ ಉಂಗುರಗಳನ್ನು ತಮ್ಮ ಬೆರಳಿಗೇರಿಸಿಕೊಂಡರು.

ಎರಡನೇ ತಿಂಗಳ ಡ್ರಾ ಇದೇ ಮಾರ್ಚ್ 9ನೇ ತಾರೀಖಿನಂದು ಸಂಜೆ 7 ಗಂಟೆಗೆ ಸರಿಯಾಗಿ ವಿಟ್ಲದ ಪುತ್ತೂರು ರಸ್ತೆಯಲ್ಲಿರುವ ಸ್ಮಾರ್ಟ್ ಸಿಟಿ ಬಿಲ್ಡಿಂಗ್ ನ ಮುಂಭಾಗದಲ್ಲಿ ಸಾರ್ವಜನಿಕರ ಎದುರಿನಲ್ಲಿ ನಡೆಸಲಾಗುವುದು.

ಈ ಬಾರಿಯ ವಿಶೇಷತೆ ಎಂದರೆ ಪ್ರತಿ ತಿಂಗಳು 20 ಸರ್ಪ್ರೈಸ್ ಗಿಫ್ಟ್ ಗಳಿದ್ದರೆ ಮಾರ್ಚ್ 9 ರ ಡ್ರಾದಲ್ಲಿ 20 ಸರ್ಪ್ರೈಸ್ ಗಿಫ್ಟ್ ಗಳ ಜೊತೆ 20 ಬಂಗಾರದ ಉಂಗುರಗಳು ಅದೃಷ್ಟಶಾಲಿಗಳ ಕೈಬೆರಳುಗಳನ್ನು ಅಲಂಕರಿಸಲು ಸಿದ್ಧಗೊಂಡಿವೆ. ಜೊತೆಗೆ 4 ಮಂದಿಗೆ ತಲಾ 50 ಸಾವಿರ ರೂಪಾಯಿಗಳ ಬೆಲೆಬಾಳುವ ಬಂಗಾರ ಲಭಿಸಲಿದೆ.

ಇವುಗಳ ಮಧ್ಯೆ ಐದನೇ ತಿಂಗಳ ಭರ್ಜರಿ ಬಂಪರ್ ಡ್ರಾ ಮಾರುತಿ ಸ್ವಿಫ್ಟ್ ಕಾರನ್ನು ಬಿಡುಗಡೆಗೊಳಿಸಲಾಯಿತು. ಮಾರುತಿ ಸ್ವಿಫ್ಟ್ ಯಾರ ಫ್ಯಾಮಿಲಿಯ ಸ್ವತ್ತಾಗಲಿದೆಯೋ, ಯಾವ ಅದೃಷ್ಟವಂತರ ಪಾಲಾಗಲಿದೆಯೋ, ಕಾದು ನೋಡಬೇಕಿದೆ. ನಿಮ್ಮ ಅದೃಷ್ಟವನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ. ಸದಸ್ಯರಾಗಲು ಸೀಮಿತ ಅವಕಾಶವಷ್ಟೇ ಇದೆ.

ನಿಮ್ಮ ಅದೃಷ್ಟದ ಸಂಖ್ಯೆ ನಿಮ್ಮ ಕನಸನ್ನು ನನಸುಗೊಳಿಸಬಹುದು. ಆದಷ್ಟು ಬೇಗ ಸದಸ್ಯರಾಗಿ ಅದೃಷ್ಟ ಪರೀಕ್ಷಿಸಿಕೊಳ್ಳಿ. ಇವೆಲ್ಲದರ ಜೊತೆಗೆ ಸ್ಮಾರ್ಟ್ ಇಂಡಿಯಾ 0.1 ಸದಸ್ಯರಾಗುವ ಪ್ರತಿಯೊಬ್ಬ ಸದಸ್ಯರಿಗೂ 1 ಲಕ್ಷ ರೂಪಾಯಿ ಮೌಲ್ಯದ ಅಪಘಾತ ವಿಮೆಯನ್ನು ಸಂಸ್ಥೆಯು ಫ್ರೀಯಾಗಿ ಉಡುಗೊರೆಯಾಗಿ ನೀಡುತ್ತಿದೆ. ಇನ್ನೇಕೆ ತಡ ಮೊಬೈಲ್ ತೆಗೆದುಕೊಳ್ಳಿ ಇಲ್ಲಿ ನೀಡಲಾದ ಸಂಖ್ಯೆಗಳಿಗೆ ಕರೆಮಾಡಿ ಸದಸ್ಯತ್ವ ಸ್ವೀಕರಿಸಿ ಅದೃಷ್ಟ ಪರೀಕ್ಷಿಸಿಕೊಳ್ಳಿ.

Leave a Reply

Your email address will not be published. Required fields are marked *

error: Content is protected !!