ಕಾರುಗಳು ನಡುವೆ ಢಿಕ್ಕಿ: ಚಾಲಕ ಸ್ಥಳದಲ್ಲೇ ಮೃತ್ಯು
ಮಂಡ್ಯ: ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಕಾರುಗಳು ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ.ಹೊಸೂರು ಗ್ರಾಮದ ಬಳಿ ನಡೆದಿದೆ.
ಮೈಸೂರು ಕಡೆಗೆ ಸ್ವಿಫ್ಟ್ ಕಾರು, ಬೆಂಗಳೂರಿನತ್ತ ವರ್ನಾ ಕಾರು ಹೊರಟಿತ್ತು. ಈ ವೇಳೆ ವರ್ನಾ ಕಾರು ಡಿವೈಡರ್ ಹಾರಿ ಬಂದು ಮೈಸೂರಿನ ಕಡೆ ಹೋಗುತ್ತಿದ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ.




