ಮಂಗಳೂರು: ಮುಳ್ಳುಹಂದಿಯ ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರ
ಮಂಗಳೂರು: ಪಾಂಡೇಶ್ವರ ಅಗ್ನಿಶಾಮಕ ದಳದ ಆವರಣಕ್ಕೆ ಬಂದ ಮುಳ್ಳುಹಂದಿ ಯನ್ನು ಇಲಾಖಾ ಸಿಬ್ಬಂದಿ ಕೃಷ್ಣ ಹಂಡಾ ಅವರು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ.
ಮುಳ್ಳು ಹಂದಿ ಅಪಾಯಕಾರಿಯಾಗಿದ್ದು, ಅದನ್ನು ಹಿಡಿಯುವುದು ಭಾರೀ ಹರಸಾಹಸದ ಕೆಲಸವಾಗಿದೆ. ಆದರೆ ಕೃಷ್ಣ ಅವರು ಅದನ್ನು ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದ್ದು, ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.




