February 4, 2026

ವಿಟ್ಲ: ನೀರಕ್ಕಣಿ ಮದರಸದಲ್ಲಿ ಮಿಲಾದ್ ಕಾರ್ಯಕ್ರಮ.

0
IMG-20231015-WA0007

ವಿಟ್ಲ ; ನೀರಕ್ಕಣಿ  ಸಿರಾಜುಲ್ ಹುದಾ ಮಸೀದಿ ಹಾಗೂ ಮದರಸ ಸಮಿತಿ ವತಿಯಿಂದ ಮಕ್ಕಳ ಮೀಲಾದ್   ಕಾರ್ಯಕ್ರಮ ವು ಅಬ್ದುಲ್ಲ ಕೋಡಪದವು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದುವು .
ಕವ್ವಾಲಿ  ಹಾಗೂ ಬುರ್ದಾ ಮಜ್ಲಿಸ್ ಜನಮನ ಸೂರೆಗೊಂಡುವು.
ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬ್ ಮಹಮ್ಮದ್ ನಸೀಹ್ ದಾರಿಮಿ ಪ್ರವಾದಿ ಸಂದೇಶ ನೀಡಿದರು.
ಕುಂಞಿಪ್ಪ ಹಾಜಿ ಸೆರೆಂತಿಮಠ ಮೊಯಿದು ಕುಂಞಿ ನೆಕ್ಕರೆಕಾಡು ,ಸಮಿತಿಯ ಗೌರವಾಧ್ಯಕ್ಷ ,ಉಮ್ಮರ್ ದಾರಿಮಿ ಪಟ್ಟೋರಿ, ಸದರ್ ಮಹಮ್ಮದ್ ಮುಸ್ಲಿಯಾರ್ ರಾಧುಕಟ್ಟೆ,ಲೇಖಕ ಅಬೂಬಕರ್ ಅನಿಲಕಟ್ಟೆ, ಮನ್ಸೂರ್ ಹಾನೆಸ್ಟ್ ಶಾಫಿ ಗಮಿ,ಮುಂತಾದವರು ವೇದಿಕೆಯಲ್ಲಿದ್ದರು.
  ಅಬೂಬಕರ್ ಗಮಿ,ಮೊಯಿದು ಹಾಜಿ ಕೆದುಮೂಲೆ, ಕೆರೀಮ್ ಸೇರಾಜೆ,ರಶೀದ್ ನೆತ್ತರೆಕೆರೆ ,ಮಹಮ್ಮದ್ ಸೇರಾಜೆ ಉಪಸ್ಥಿತರಿದ್ದರು.
ಕೆ.ಎಂ‌ ಎ.ಕೊಡಂಗಾಯಿ ನಿರೂಪಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!