ವಿಟ್ಲ;ಗಾಂಧಿನಗರದಲ್ಲಿ ಮಿಲಾದ್ ಫೆಸ್ಟ್
ವಿಟ್ಲ; ವಿಟ್ಲ ಗಾಂಧಿ ನಗರದ ಮಾರ್ನಮಿಗುಡ್ಡೆ ಮಸ್ಜಿದುಲ್ ಬದ್ರಿಯಾ ಅಧೀನದ ಹಯಾತುಲ್ ಇಸ್ಲಾಂ ಮದರಸದ ಮಿಲಾದ್ ಫೆಸ್ಟ್ ಕಾರ್ಯಕ್ರಮವು ಅಧ್ಯಕ ಆಸಿಫ್ ನೆಕ್ಕರೆಕಾಡು ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ವಿಟ್ಲ ಕೇಂದ್ರ ಜುಮಾ ಮಸೀದಿಯ ಖತೀಬ್ ಮಹಮ್ಮದ್ ದಾರಿಮಿ ದುವಾದ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು
ಈ ಸಂದರ್ಭ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಅಬೂಬಕರ್ ಅನಿಲಕಟ್ಟೆ ಹಾಗೂ ಸಲ್ಮಾನ್ ಪಾರಿಸ್ ತೀರ್ಪಗಾರರಾಗಿದ್ದರು
ಮದರಸ ವಿದ್ಯಾರ್ಥಿಗಳ ಕವ್ವಾಲಿ ಆಕರ್ಷಕ ವಾಗಿತ್ತು.
ಅಬೂಬಕರ್ ಮುಸ್ಲಿಯಾರ್,ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಇಸ್ಮಾಯಿಲ್ ಶಾಫಿ ,ಉಪಾಧ್ಯಕ್ಷ ಇಬ್ರಾಹಿಂ ಕುಂಞಿ, ಅಬೂಸಾದಿಕ್,ಅಬೂಸ್ವಾಲಿ,ಜಿ.ಎನ್ ಇಸ್ಮಾಯಿಲ್, ಮುನೀರ್ ಗಮಿ,ಲತೀಫ್ ನೆಕ್ಕರೆಕಾಡು,ಜಲೀಲ್,ಹನೀಫ್ ವಿ.ಕೆ., ಮನ್ಸೂರ್ ಹಾನೆಸ್ಟ್ ಮುಂತಾದವರು ಉಪಸ್ಥಿತರಿದ್ದರು.
ಸದರ್ ಖಾಸಿಂ ಸಅದಿ ಸ್ವಾಗತಿಸಿದರು.
ಮಹಮ್ಮದ್ ಮುಸ್ತಫಾ ಹನೀಫಿ ಮತ್ತು ಮಹಮ್ಮದ್ ಇಹ್ಲನ್ ,ಮಝಮ್ಮಿಲ್ ನಿರೂಪಿಸಿದರು.
ಅಬ್ದುಲ್ ರಹಿಮಾನ್ ಮದನಿ ವಂದಿಸಿದರು.