ಸಾಗರ:ತಾಲೂಕಿನ ಆನಂದಪುರ ತಾವರೆಹಳ್ಳಿಯ ಕೆರೆಯಲ್ಲಿ ರೈತ ಸತೀಶ್ ಗೌಡ (51) ಎಂಬುವವರು ಕಾಲುಜಾರಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಜೇಡಿಸರ ರೈತ ಸತೀಶ್ ಗೌಡ ಬಿನ್ ಸ್ವಾಮಿಗೌಡ ಎಂಬುವವರು ತಮ್ಮ ಮಗ ಚೇತನ್ ಜೊತೆ ಎಮ್ಮೆಯನ್ನು ಹುಡುಕಿಕೊಂಡು ಕೆರೆ ದಂಡೆಯ ಮೇಲೆ ಬರುತ್ತಿದ್ದಾಗ ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದಿದ್ದಾರೆ ಎನ್ನಲಾಗಿದೆ.