ವಿಟ್ಲ: ಬಸ್ ನಿಲ್ದಾಣದ ಮೊಬೈಲ್ ಬೆಂಕಿ ಅನಾಹುತ
ವಿಟ್ಲ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮೊಬೈಲ್ ಮಳಿಗೆಗೆ ಹಾನಿಯುಂಟಾದ ಘಟನೆ ವಿಟ್ಲ ಖಾಸಗಿ ಬಸ್ ನಿಲ್ದಾಣದ ಬಳಿ ನಡೆದಿದೆ.
ವಿಟ್ಲ ಖಾಸಗಿ ಬಸ್ ನಿಲ್ದಾಣದ ಬಳಿಯ ಕಾಮಧೇನು ಟೆಲಿಕಮ್ಯುನಿಕೇಶನ್ಸ್ ಮೊಬೈಲ್ ಸೇಲ್ಸ್ & ಸರ್ವಿಸ್ ಮಳಿಗೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಮಾಲಕ ಸಂತೋಷ್ ಶೆಟ್ಟಿ ಅವರು ಮೊಬೈಲ್ ಶಾಪ್ ಮುಚ್ಚಿ ಮನೆಗೆ ತೆರಳಿದ ವೇಳೆ ಘಟನೆ ಸಂಭವಿಸಿದ್ದು, ಘಟನೆಯಿಂದಾಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ.







