December 15, 2025

ಕುಂದಾಪುರ: ಬೈಕ್-ಕಾರು ನಡುವೆ ಅಪಘಾತ: ಬೈಕ್ ಸವಾರ ಮೃತ್ಯು
 

0
image_editor_output_image1507835209-1690812720660.jpg


ಕುಂದಾಪುರ: ಬೈಕ್ ಹಾಗೂ ಕಾರುಗಳ ಡಿಕ್ಕಿಯ ಪರಿಣಾಮ ಬೈಕ್ ಸವಾರ ಸ್ಥಳೀಯ ನಿವಾಸಿ ನರಸಿಂಹ ಶೆಟ್ಟಿ (75) ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಕೋಟೇಶ್ವರ ಸಮೀಪದ ಕಾಳಾವರ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ.

ಕೋಟೇಶ್ವರ ಶಾಲೆ ಸಮೀಪದ ಅಡ್ಡ ರಸ್ತೆಯಿಂದ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಬಂದ ನರಸಿಂಹ ಶೆಟ್ಟಿ, ಕೋಟೇಶ್ವರ – ಹಾಲಾಡಿ ಮುಖ್ಯರಸ್ತೆಗೆ ಏಕಾಏಕಿ ಪ್ರವೇಶಿಸಿದ್ದರಿಂದ ಈ ದುರಂತ ಸಂಭವಿಸಿದೆ.

ಕೋಟೇಶ್ವರ ಕಡೆಯಿಂದ ಹಾಲಾಡಿ ಕಡೆಗೆ ಸಾಗುತ್ತಿದ್ದ ಬೊಲೆರೋ ಕಾರಿಗೆ ದ್ವಿಚಕ್ರ ವಾಹನ ಹಠಾತ್ತನೆ ಅಡ್ಡ ಬಂದಿದ್ದರಿಂದ ಚಾಲಕ ಬ್ರೇಕ್ ಹಾಕಿದ್ದರಿಂದ ಕಾರು ನಿಯಂತ್ರಣ ತಪ್ಪಿ ರಸ್ತೆಯ ಬಲಕ್ಕೆ ಸರಿದು ಕಲ್ಲು ಕಂಬವನ್ನು ತುಂಡರಿಸಿ, ಸುಮಾರು ಐವತ್ತು ಅಡಿ ದೂರ ಸಾಗಿ, ಒಂದು ಗುಡಿಯ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಗಂಭೀರವಾಗಿ ಗಾಯಗೊಂಡ ದ್ವಿಚಕ್ರ ವಾಹನ ಸವಾರ ನರಸಿಂಹ ಶೆಟ್ಟಿಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಕೊನೆಯುಸಿರು ಎಳೆದರು ಎನ್ನಲಾಗಿದೆ.

ಕಾರಿನಲ್ಲಿ ಚಾಲಕ ಸುದೀಪ್ ಮಾತ್ರ ಇದ್ದು ಯಾವುದೇ ಗಾಯಗಳಾಗಿಲ್ಲ. ಕಾರಿನ ಮುಂಭಾಗ ಜಖಂಗೊಂಡಿದೆ.

ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!