ಭಟ್ಕಳ: ಅಲೆಗೆ ಸಿಕ್ಕಿ ಮುಳುಗಿದ ಮೀನುಗಾರಿಕಾ ದೋಣಿ
ಭಟ್ಕಳ :ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಬಂದರಿನಿಂದ ಮೀನುಗಾರಿಕಾ ತೆರಳಿದ ದೋಣಿಗಳಲ್ಲಿ ಎರಡು ದೋಣಿ ಗಾಳಿ ಮತ್ತು ಅಲೆಗೆ ಸಿಕ್ಕಿ ದೋಣಿ ಮುಳುಗಿ ಹೋಗಿದ್ದು ಅದರಲ್ಲಿದ್ದ ಇಬ್ಬರನ್ನೂ ರಕ್ಷಣೆ ಮಾಡಿದ್ದಾರೆ.
ಬೆಳಗ್ಗೆ ಭಟ್ಕಳ ಬಂದರಿನ ಬೆಳಕೆಯಿಂದ ಮೀನುಗಾರಿಕೆಗೆ ತೆರಳಿದ ಮೀನುಗಾರಿಕೆ ಮಾಡುವಾಗ ರಭಸವಾಗಿ ಬಿಸಿದ ಗಾಳಿ ಮತ್ತು ಅಲೆಗೆ ದೋಣಿಯಲ್ಲಿದ್ದ ಹುಟ್ಟು (ನೀರು ತೆಳ್ಳುವ ಸಾಧನ ) ಸಮುದ್ರ ಪಾಲಾಗಿದೆ.
ಎರಡು ದೋಣಿಯಲ್ಲಿದ್ದ ಇಬ್ಬರು ಯುವಕರು ದೋಣಿ ಹಿಡಿದು ಕೊಂಡು ನೀರಿನಲ್ಲಿ ತೇಲುತ್ತಿದ್ದು ಕಂಡು ಅಲ್ಲಿ ಹತ್ತಿರವಿದ್ದ ದೋಣಿಯವರು ರಕ್ಷಣೆ ಮಾಡಿದ್ದಾರೆ.




