ಮಂಗಳೂರು: ಹೊಟೇಲ್ ನಲ್ಲಿ ಮೊಬೈಲ್ ಕಳವು, ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಮಂಗಳೂರಿನ ಹೊಟೇಲ್ ವೊಂದರಲ್ಲಿ ಮೊಬೈಲ್ ಕಳ್ಳತನ ನಡೆದಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದ ಕದ್ರಿ ಪೆಟ್ರೋಲ್ ಪಂಪ್ ನ ಎದುರುಗಡೆ ಇರುವ ಶ್ರೀ ಕಟೀಲ್ ಎಂಬಲ್ಲಿ ಹೊಟೇಲ್ ನ ಲ್ಲಿ ಅಪರಿಚಿತ ವ್ಯಕ್ತಿಯೋರ್ವ ಈ ಕಳವು ಕೃತ್ಯ ನಡೆಸಿದ್ದಾರೆ.
ಈ ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಬಗ್ಗೆ ಹೋಟೆಲ್ ನ ಮಾಲೀಕರಾದ ಮಹೇಶ್ ಎಸ್. ಅವರು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.




